ತಾಳಿಕೋಟೆ: ಪಟ್ಟಣದ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ಒಂದಾದ ಎಸ್.ಎಸ್.ವಿದ್ಯಾ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಶ್ರೀ ಎಚ್.ಎಸ್.ಪಾಟೀಲ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳಾದ ವೀರೇಶ ಲೋಟಗೇರಿ ,ಉಮಾಕಾಂತ ಚವ್ಹಾಣ, ಧರ್ಮಣ್ಣ ಉಂಡಿ ಹಾಗೂ ಮೌಲಾಲಿ ಅತ್ತಾರ ಫೇ.25 ರಂದು ಎಂ.ಈ.ಎಸ್. ಕಲಾ ವಾಣಿಜ್ಯ ಹಾಗೂ ಬಿ.ಸಿ.ಎ ಪದವಿ ಮಹಾವಿದ್ಯಾಲಯ ಮೂಡಲಗಿಯಲ್ಲಿ ನಡೆದ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ 2025-26 ನೇ ಸಾಲಿನ ಖೋ – ಖೋ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಈ ನಾಲ್ಕು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಕೀರ್ತಿ ಹೆಚ್ಚಿಸಿದ್ದಕ್ಕಾಗಿ ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.ಕಾರ್ಯದರ್ಶಿ ಸಚಿನ್.ಎಚ್.ಪಾಟೀಲ ,ಆಡಳಿತಾಧಿಕಾರಿ ಕಿರಣ್.ಎಚ್.ಪಾಟೀಲ, ಹಾಗೂ ಪ್ರಾಚಾರ್ಯರಾದ ಶಿವಕುಮಾರ ನಾಯಕ, ಉಪನ್ಯಾಸಕನಎಂ ಎಸ್ ರಾಯಗೊಂಡ, ಶರಣು ಬಿರಾದಾರ, ಸಾಬಣ್ಣ ಮೇಟಿ, ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

