Category: ರಾಜ್ಯ

ಅಳವಂಡಿಯ ಸಿದ್ದೇಶ್ವರನ ಮಹಾರಥೋತ್ಸವ

ಭಾವೈಕ್ಯತೆ, ಶ್ರದ್ಧಾ ಭಕ್ತಿಯ ಕೇಂದ್ರ ಅಳವಂಡಿಯ ಸಿದ್ದೇಶ್ವರನ ಮಹಾರಥೋತ್ಸವ ಶುಕ್ರವಾರ ಸಡಗರದಿಂದ ಜರುಗಿತು. ಮಹಾರಥೋತ್ಸವಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು. ಯಾವುದೇ ಧರ್ಮ, ಬೇಧವಿಲ್ಲದೆ ಸಹಸ್ರಾರು ಜನರು ಜಾತ್ರೆಯಲ್ಲಿ ಭಕ್ತಿ ಮೆರೆದರು.ಮುಂಜಾನೆಯ ಸೂರ್ಯನ ಕಿರಣಗಳು ಭೂಮಿಗೆ ತಾಕುವುದಕ್ಕಿಂತ ಮೊದಲೇ ಭಕ್ತರು ಸಿದ್ದೇಶ್ವರನ ದರ್ಶನ…

ಡಾ. ನಾಗಲಕ್ಷ್ಮೀ ಚೌಧರಿ ಅವರ ಜಿಲ್ಲಾ ಪ್ರವಾಸ ಫೆ. 5 ರಿಂದ

ಕೊಪ್ಪಳ : ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ಫೆ. 5 ರಿಂದ ಎರಡು ದಿನ ಜಿಲ್ಲೆಯಲ್ಲಿ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.ಅವರು ಫೆ.5 ರಂದು ಬೆಳಗ್ಗೆ 6.30 ಗಂಟೆಗೆ ಕೊಪ್ಪಳಕ್ಕೆ ಬಂದು. ಬೆಳಿಗ್ಗೆ 10 ಗಂಟೆಗೆ ಜಿಲ್ಲಾಡಳಿತ…

ಶತದಿನದ ಹೋರಾಟದ ಪೂರ್ವಭಾವಿ ಸಭೆ ಕೊಪ್ಪಳ : ಜ.31: ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆಯಿಂದ ಭಾಗ್ಯನಗರ ರೈಲ್ವೆ ಬ್ರಿಡ್ಜ್ ಸಮೀಪದ ಬಾಲಾಜಿ ಫಂಕ್ಷನ್ ಹಾಲ್‌ನಲ್ಲಿ ಇಂದು ಶತದಿನದ ಹೋರಾಟದ ಪೂರ್ವಭಾವಿ ಸಭೆ ನಡೆಯಿತು.ಕಾರ್ಖಾನೆ ವಿರೋಧಿ ಹೋರಾಟ ಫೆ.7ರಂದು ಶತದಿನ ಪೂರೈಸಲಿದೆಈ ಹಿನ್ನೆಲೆಯಲ್ಲಿ ಹೋರಾಟವನ್ನು ಯಶಸ್ವಿಗೊಳಿಸಲು ಸಭೆಯಲ್ಲಿ ಪಾಲ್ಗೊಂಡ ವಿವಿಧ ಸಂಘ, ಸಂಸ್ಥೆಗಳ ಮುಖಂಡರು ಒಮ್ಮತದ ತೀರ್ಮಾನ ತೆಗೆದುಕೊಂಡರು. ಮಾಜಿ ತಾಪಂ ಅಧ್ಯಕ್ಷ ದಾನಪ್ಪ ಕವಲೂರ ಮಾತನಾಡಿ, ಇಲ್ಲಿರುವ ಒಂದೂವರೆ ಲಕ್ಷ ಜನರಲ್ಲಿ ಅರ್ಧದಷ್ಟು ಜನ ಕಾರ್ಖಾನೆಗಳ ಧೂಳು, ಹೊಗೆ, ಬೂದಿ ಬಾಧೆಗೆ ತುತ್ತಾಗಿದ್ದಾರೆ. 20 ಬಾಧಿತ ಹಳ್ಳಿಯ ಐವತ್ತು ಸಾವಿರ ಜನರು ಅನಾರೋಗ್ಯದ ಗಂಭೀರ ಸಮಸ್ಯೆಯಿಂದ ಸಾವಿನ ದವಡೆಗೆ ಸಿಲುಕಿದ್ದಾರೆ ಎಂದರು. ಸಭೆಯಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಜಂಟಿ ಕ್ರಿಯಾ ಸಮಿತಿ ಪ್ರಮುಖರಾದ ಸಾಹಿತಿ ಎಚ್.ಎಸ್.ಪಾಟೀಲ್, ಡಿ.ಎಚ್. ಪೂಜಾರ, ಡಿ.ಎಂ.ಬಡಿಗೇರ, ಮಲ್ಲಿಕಾರ್ಜುನ ಬಿ.ಗೋನಾಳ, ಡಾ. ಮಂಜುನಾಥ ಸಜ್ಜನ್, ಮಂಜುನಾಥ ಜಿ. ಗೊಂಡಬಾಳ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ, ಪೀರಾ ಹುಸೇನ್ ಹೊಸಳ್ಳಿ, ರಾಜು ಬಾಕಳೆ, ಸೌಮ್ಯ ನಾಲವಾಡ, ಮಾಲಾ ಬಡಿಗೇರ, ಸರೋಜಾ ಬಾಕಳೆ, ಶ್ವೇತಾ ಅಕ್ಕಿ, ವಿಜಯ ದೊರೆರಾಜು, ಹನುಮಂತರಾವ ವಕೀಲರು, ಬಾಳಪ್ಪ ವಕೀಲರು, ಶರಣು ಗಡ್ಡಿ, ನಟರಾಜ ಸವಡಿ, ಭೀಮಸೇನ ಕಲಕೇರಿ, ನಜೀರ್ ಸಾಬ್ ಮೂಲಿಮನಿ, ಎಂ.ಕೆ.ಸಾಹೇಬ್, ಕಾಶಪ್ಪ ಚಲುವಾದಿ, ಜ್ಯೋತಿ ಜಿ. ಕದ್ರಳ್ಳಿಮಠ ಮಾತನಾಡಿದರು. ಸಭೆಯಲ್ಲಿ ಸಾಹಿತಿ ಎ.ಎಂ. ಮದರಿ ಕಾವ್ಯಾ ಗಡಿದ್, ಸುನಂದಾ ಬಾರಕೇರ್, ಲತಾ ಉತ್ತಂಗಿಮಠ, ದ್ಯಾಮಣ್ಣ ಚಿಲವಾಡಗಿ, ರಾಜಶೇಖರ ಏಳುಬಾವಿ, ವಿದ್ಯಾ ನಾಲವಾಡ, ಶಿವಸಂಗಪ್ಪ ವಣಗೇರಿ, ಸುಜಾತಾ ಹಲಗೇರಿ, ಸಂಗಪ್ಪ ವಾರದ, ಜಿ.ಎಸ್.ಕಡೇಮನಿ, ಜಗದೀಶ ಕುಂಬಾರ, ಗಣೇಶ ವಿಶ್ವಕರ್ಮ, ಶಿವಣ್ಣ ದೆವರಮನಿ, ಗವಿಸಿದ್ದಪ್ಪ ಹಲಿಗಿ, ರಮೇಶ ಡಂಬ್ರಳ್ಳಿ, ಮಂಜು ಕೆಂಚನಗೌಡ್ರ, ಮಾರ್ಕಾಂಡೇಯ ಹಿರೇಮಠ, ರತ್ನಾಕರ್ ತಳವಾರ, ಶುಕರಾಜ ತಾಳಕೇರಿ, ಭೀಮಪ್ಪ ಹವಳಿ, ಈಶಪ್ಪ ದೊಡ್ಡಮನಿ, ಯಮನೂರಪ್ಪ ಹಳ್ಳಿಕೇರಿ, ಸದಾಶಿವ ಪಾಟೀಲ್, ಶಂಭುಲಿಂಗಪ್ಪ ಹರಗೇರಿ, ಎಸ್.ಬಿ.ರಾಜೂರು, ಸದಾಶಿವ ಪಾಟೀಲ್, ಬಿ.ಜಿ.ಕರಿಗಾರ, ನೂರಂದಪ್ಪ ಉಪ್ಪಿನ್, ಈಶ್ವರ ಕೊರ್ಲಹಳ್ಳಿ, ಜ್ಯೋತಿ ಮಟ್ಟಿ, ಜ್ಯೋತಿ ಜಿ.ಕೆ, ಉಮರ್ ಫಾರೂಕ್, ರುಕ್ಸಾನಾ ಎ.ಕೆ, ರಾಜೇಶ್ ಸಸಿಮಠ, ಮಂಗಳೇಶ ರಿಠೋಡ್, ಅನ್ನಪೂರ್ಣ ಮನ್ನಾಪೂರ, ಮೈತ್ರಾ ಜೆ, ಚಂದ್ರೇಗೌಡ ಪಾಟೀಲ್, ಹನುಮೇಶ ಕಾಲ್ಮಂಗಿ, ಗಾಳೆಪ್ಪ ಹೂವಿನಾಳ, ಸುರೇಶ್ ಪೂಜಾರ, ಪ್ರಕಾಶ ಹೊಳೆಯಪ್ಪನವರ, ಮಹಾದೇವಪ್ಪ ಮಾವಿನಮಾಡು ಭಾಗವಹಿಸಿದ್ದರು.

ಕೊಪ್ಪಳ : ಜ.31: ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆಯಿಂದ ಭಾಗ್ಯನಗರ ರೈಲ್ವೆ ಬ್ರಿಡ್ಜ್ ಸಮೀಪದ ಬಾಲಾಜಿ ಫಂಕ್ಷನ್ ಹಾಲ್‌ನಲ್ಲಿ ಇಂದು ಶತದಿನದ ಹೋರಾಟದ ಪೂರ್ವಭಾವಿ ಸಭೆ ನಡೆಯಿತು.ಕಾರ್ಖಾನೆ ವಿರೋಧಿ…

ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಬಾಕಿ ಉಳಿದ ಯೋಜನೆಗಳಿಗೆ ವೇಗ ನೀಡುವ ಮತ್ತು ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ಪ್ರಕಟಿಸಬಹುದು ಎನ್ನುವ ನಿರೀಕ್ಷೆ

ಕೊಪ್ಪಳ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಭಾನುವಾರ ಕೇಂದ್ರ ಬಜೆಟ್‌ ಮಂಡನೆ ಮಾಡಲಿದ್ದು, ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಬಾಕಿ ಉಳಿದ ಯೋಜನೆಗಳಿಗೆ ವೇಗ ನೀಡುವ ಮತ್ತು ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ಪ್ರಕಟಿಸಬಹುದು ಎನ್ನುವ ನಿರೀಕ್ಷೆ ಗರಿಗೆದರಿದೆ.ಎಚ್.ಡಿ. ದೇವೇಗೌಡ ಅವರು…

ಘನತ್ಯಾಜ್ಯ ವಿಲೇವಾರಿ ಘಟಕ ಹಾಗೂ ಸಂಸ್ಕರಣಾ ಕೇಂದ್ರದ ಸುತ್ತ ಲಕ್ಷಾಂತರ ಅನುದಾನದಲ್ಲಿ ನಿರ್ಮಾಣಗೊಂಡಿರುವ ಆವರಣ ಗೋಡೆ ಕಳಪೆ ಕಾಮಗಾರಿ ಸ್ಥಳ ಪರಿಶೀಲನೆ

ಕೊಪ್ಪಳ : ಪಟ್ಟಣದ ಹೊರವಲಯದ ಟೆಂಗುಂಟಿ ರಸ್ತೆಯಲ್ಲಿರುವ ಪುರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕ ಹಾಗೂ ಸಂಸ್ಕರಣಾ ಕೇಂದ್ರದ ಸುತ್ತ ಲಕ್ಷಾಂತರ ಅನುದಾನದಲ್ಲಿ ನಿರ್ಮಾಣಗೊಂಡಿರುವ ಆವರಣ ಗೋಡೆ ಕಳಪೆ ಕಾಮಗಾರಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ಶನಿವಾರ ಸ್ಥಳ ಪರಿಶೀಲನೆ ನಡೆಸಿದರು.2018-19ನೇ ಹಣಕಾಸು ವರ್ಷದಲ್ಲಿ…

ಪ್ರಜಾಸೌಧ ಸ್ಥಳ ದಾನದಲ್ಲಿ ಸ್ವಾರ್ಥ ಹಿತಾಸಕ್ತಿ ಇಲ್ಲ: ಮದರಕಲ್ಲ

ತಾಳಿಕೋಟಿ: ಪಟ್ಟಣದಲ್ಲಿ ನಿರ್ಮಾಣವಾಗಲಿರುವ ಪ್ರಜಾ ಸೌಧ ಕಟ್ಟಡಕ್ಕೆ ಸ್ಥಳ ದಾನ ಮಾಡಿರುವುದರ ಹಿಂದೆ ಪಟ್ಟಣದ ಅಭಿವೃದ್ಧಿಯ ಹಿತ ಹೊರತುಪಡಿಸಿದರೆ ಯಾವ ಸ್ವಾರ್ಥ ಹಿತಾಸಕ್ತಿಯೂ ಇಲ್ಲ ಎಂದು ಪುರಸಭೆ ಮಾಜಿ ಸದಸ್ಯ ಪ್ರಭುಗೌಡ ಮದರಕಲ್ಲ ಹೇಳಿದರು. ರವಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪ್ರಜಾಸೌಧ…

ಕೇಂದ್ರ ಸಚಿವ ಪ್ರಲ್ಹಾದ ಜೋಶಿಗೆ ಆಹ್ವಾನ

ತಾಳಿಕೋಟಿ: ಪಟ್ಟಣದಲ್ಲಿ ರಜಪೂತ ಸಮಾಜದ ವತಿಯಿಂದ ಪ್ರತಿಷ್ಠಾಪನೆಗೊಂಡಿರುವ ಮಹಾರಾಣಾ ಪ್ರತಾಪ್ ಸಿಂಹ ಅವರ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೇಂದ್ರ ಗ್ರಾಹಕ ವ್ಯವಹಾರಗಳು ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಲ್ಹಾದ ಜೋಶಿ ಇವರಿಗೆ ಶುಕ್ರವಾರ ಆಮಂತ್ರಣ ನೀಡಲಾಯಿತು. ಬಿಜೆಪಿ ಜಿಲ್ಲಾ…

ಬಾಲಕ ರೆಹಾನಖಾನ್ ವಠಾರಗೆ ಸನ್ಮಾನ

ತಾಳಿಕೋಟಿ: ಪಟ್ಟಣದ ಸರ್ವಜ್ಞ ವಿದ್ಯಾಪೀಠ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ 7 ವರ್ಷದ ಬಾಲಕ ರೆಹಾನಖಾನ್ ಅಯ್ಯೂಬಖಾನ್ ವಠಾರ ಈತನು ಸೈಡ್ ಸಿಟ್ ಅಪ್ ನಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ…

ಉನ್ನತ ಶಿಕ್ಷಣ ಇಲಾಖೆಯಲ್ಲಿ 2000 ಬೋಧಕ ಹುದ್ದೆಗಳಿಗೆ ಭರ್ತಿ — ಆರ್ಥಿಕ ಇಲಾಖೆಯಿಂದ ಅನುಮತಿ

ಬೆಂಗಳೂರು: 2025-26ನೇ ಸಾಲಿನ ರಾಜ್ಯ ಆಯವ್ಯಯ ಭಾಷಣದ ಕಂಡಿಕೆ–124ರ ಘೋಷಣೆಯಂತೆ, ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ. ಆಡಳಿತ ಇಲಾಖೆಯ ಪ್ರಸ್ತಾವನೆಯನ್ನು ಪರಿಶೀಲಿಸಿದ ಬಳಿಕ ಒಟ್ಟು 2000 ಬೋಧಕ…

ರಾಜ್ಯ ಸಿವಿಲ್ ಸೇವಾ ನೇರ ನೇಮಕಾತಿ — ಗರಿಷ್ಠ ವಯೋಮಿತಿಯಲ್ಲಿ 5 ವರ್ಷ ಸಡಿಲಿಕೆ: ಸರ್ಕಾರದ ಹೊಸ ಆದೇಶ

ಬೆಂಗಳೂರು: ರಾಜ್ಯ ಸಿವಿಲ್ ಸೇವಾ ಹುದ್ದೆಗಳಿಗೆ ಮಾಡುವ ನೇರ ನೇಮಕಾತಿಗಳಲ್ಲಿ ಅಭ್ಯರ್ಥಿಗಳಿಗೆ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯನ್ನು ಒಂದು ಬಾರಿಯ ಕ್ರಮವಾಗಿ 5 ವರ್ಷಗಳಷ್ಟು ಸಡಿಲಿಕೆ ನೀಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಅನೇಕ ಉದ್ಯೋಗಾಕಾಂಕ್ಷಿಗಳಿಗೆ ಮತ್ತೊಂದು ಅವಕಾಶ ದೊರೆತಿದೆ.…