ತಾಳಿಕೋಟಿ: ಪಟ್ಟಣದ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಫೌಂಡೇಶನ್(ರಿ) ಇದರ 9 ನೇ ವಾರ್ಷಿಕೋತ್ಸವದ ಪ್ರಯುಕ್ತ ಹಮ್ಮಿಕೊಂಡ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಹಾಗೂ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಸಂಗನಗೌಡ ಲಿಂಗದಳ್ಳಿ ಇವರನ್ನು ಗೌರವಿಸಲಾಯಿತು. ಧಾರ್ಮಿಕ ಮುಖಂಡ ಸೈಯದ್ ಶಕೀಲ ಅಹ್ಮದ್ ಖಾಜಿ, ಸಿದ್ದನಗೌಡ ಪಾಟೀಲ(ನಾವದಗಿ),ಪ್ರಭುಗೌಡ ಮದರಕಲ್ಲ,ಸಂಗನಗೌಡ ಲಿಂಗದಳ್ಳಿ, ಮುಸ್ಲಿಂ ಬ್ಯಾಂಕ್ ಅಧ್ಯಕ್ಷ ಮೆಹಬೂಬ ಕೆಂಭಾವಿ, ಮಹಾಂತೇಶ ಮುರಾಳ, ಇಬ್ರಾಹೀಮ ಮನ್ಸೂರ, ಹಸನಸಾಬ ಕೋರ್ಕಿ, ನಾಸೀರ ಹುಸೇನ ಇನಾಮದಾರ, ಮಹೆಬೂಬಸಾಬ ಖಾದ್ರಿ, ಫೌಂಡೇಶನ್ ಅಧ್ಯಕ್ಷ ಮೊಹಮ್ಮದ್ ಶಫೀಕ ಇನಾಮದಾರ,ಶೌಕತ್ ಲಾಹೋರಿ ಹಾಗೂ ಫೌಂಡೇಶನ್ ದ ಪದಾಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *