ತಾಲೂಕಿನ ಜಾಲಿಹಾಳ ಜಡೇಶಂಕರಲಿಂಗ ದೇವಸ್ಥಾನದಲ್ಲಿ ನಾಗಲಿಕರ್ ಸಿಂಪಿ ಸಮಾಜದ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಾದ ಗೌರವಾಧ್ಯಕ್ಷ ಎಲ್.ಅಮರೇಶ ನಾಗಲಿಕರ್ ಮತ್ತು ಅಧ್ಯಕ್ಷ ಶರಣಪ್ಪ ನಾಗಲಿಕರ್, ಉಪಾಧ್ಯಕ್ಷ ಬಸವರಾಜ ಖಾನಾವಳಿ, ಅವರಿಗೆ ಮೂರನೇ ಮೈಲ್ ಕ್ಯಾಂಪ್ ಷ.ಬ್ರ.ರಂಭಾಪುರಿ ಶಾಖಾಮಠದ ಶ್ರೀ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಹಾಗೂ ಚೆನ್ನಯ್ಯಸ್ವಾಮಿ ಕಲ್ಮಠವರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ: ನೂತನ ಪದಾಧಿಕಾರಿಗಳಾದ ಸಂಗಪ್ಪ ಮಜ್ಜಿಗಿ, ರಮೇಶ ಟೆಲರ್ ಶರಣಪ್ಪ ಆರಾಪುರ, ಸದಸ್ಯರಾದ ಸಂಗಪ್ಪ ಗಿಡದ್, ಶಿವರಾಜ ನಾಗಲಿಕರ್, ಸುರೇಶ, ನಾಗರಾಜ ಜಾಲಿಹಾಳ, ಅಯ್ಯಪ್ಪ ಮುಕುಂದ ವೀರೇಶ ಗಬ್ಬೂರು, ಬಸವರಾಜ ಅರಸೂರು, ಪ್ರಶಾಂತ ಇತ್ನಾಳ್, ಸುಮಲತಾ ನಾಗಲಿಕರ್ ಬಸವರಾಜ ಟೆಲರಗ, ಗಣೇಶ ನಾಗಲಿಕರ್ ಶಂಕರ ನಾಗಲಿಕರ್, ರಾಜೇಶ ನಾಗಲಿಕರ್, ಸೇರಿದಂತೆ ಸಮಾಜದ ಎಲ್ಲಾ ಹಿತೈಷಿಗಳು, ಬಂಧುಗಳು, ಭಾಗವಹಿಸಿದ್ದರು.

