ಸಿಂಧನೂರಿನ ಸನ್ರೈಸ್ ಡಿ ಫಾರ್ಮಸಿ , ನರ್ಸಿಂಗ್ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ತೃತೀಯ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಭವ್ಯವಾದ ಬೀಳ್ಕೊಡುಗೆ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಇರ್ಫಾನ್ ಕೆ. ಅತ್ತಾರ್ ಅವರು ವಹಿಸಿದರು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ಡಾ. ನಾಗರಾಜ್ ಕಾಟ್ವ ರವರು ಮತ್ತು ವೇದಿಕೆ ಮೇಲೆ ಇರುವ ಎಲ್ಲರೂ ಸೇರಿ ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಡಾ. ನಾಗರಾಜ್ ಕಾಟ್ವ ರವರು ಮಾತನಾಡಿ, “ನರ್ಸಿಂಗ್ ವಿದ್ಯಾಭ್ಯಾಸ ಪೂರ್ಣಗೊಳಿಸಿ ಹೊರಟುತ್ತಿರುವ ನಿಮ್ಮೆಲ್ಲರೂ ಜೀವನದಲ್ಲಿ ಉತ್ತಮ ಭವಿಷ್ಯ ಕಟ್ಟಿಕೊಳ್ಳಬೇಕು. ಸನ್ರೈಸ್ ಕಾಲೇಜಿನಿಂದ ಹೊರಬರುತ್ತಿರುವ ವಿದ್ಯಾರ್ಥಿಗಳು ತಮ್ಮ ಸೇವೆಯಿಂದ ಎಲ್ಲರಿಂದಲೂ ‘ಅತ್ಯುತ್ತಮ ಕಾಲೇಜಿನ ವಿದ್ಯಾರ್ಥಿಗಳು’ ಎಂಬ ಹೆಗ್ಗಳಿಕೆಗೆ ಪಾತ್ರರಾಗಬೇಕು. ಸಮಾಜಕ್ಕೆ ಉತ್ತಮ ಪ್ರಜೆಯಾಗಿರಿ, ಆಸ್ಪತ್ರೆಗಳಲ್ಲಿ ಉತ್ತಮ ನರ್ಸ್ ಆಗಿರಿ, ಮತ್ತು ತಂದೆ-ತಾಯಿಯರಿಗೆ ಹೆಮ್ಮೆಪಡುವ ಮಕ್ಕಳಾಗಿರಿ,” ಎಂದು ಸಂದೇಶ ನೀಡಿದರು.
ಅಧ್ಯಕ್ಷೀಯ ಭಾಷಣದಲ್ಲಿ ಶ್ರೀ ಇರ್ಫಾನ್ ಕೆ. ಅತ್ತಾರ್ ಮಾತನಾಡಿ, “’ನರ್ಸ್’ ಅನ್ನುವ ಪದಕ್ಕೆ ಇರುವ ಮಹತ್ವ ಅಪಾರ. ಒಬ್ಬ ನರ್ಸ್ ಜೀವನದಲ್ಲಿ ಅನುಸರಿಸಬೇಕಾದ ಶಿಸ್ತು, ಸೇವಾಭಾವ ಮತ್ತು ಮನುಷ್ಯತ್ವವೇ ಅವರ ನಿಜವಾದ ಶಕ್ತಿ. ವಿದ್ಯಾರ್ಥಿಗಳು ಈ ಮೌಲ್ಯಗಳನ್ನು ಜೀವನಪೂರ್ತಿ ಪಾಲಿಸಬೇಕು,” ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀ ಲಾಜರ್ ಸಿರಿಲ್ ಜಿ ಅವರು ಮಾತನಾಡಿ,
“ನಿಮ್ಮಲ್ಲಿರುವ ಕೌಶಲ್ಯ, ಜ್ಞಾನ ಮತ್ತು ಮನುಷ್ಯತ್ವವೇ ನಿಮ್ಮನ್ನು ಜೀವನದಲ್ಲಿ ಮುನ್ನಡೆಸುತ್ತದೆ. ನೀವು ಜೀವಗಳ ಜೊತೆ ಕೆಲಸ ಮಾಡುವ ವೃತ್ತಿಯವರಾಗಿದ್ದೀರಿ; ಆದ್ದರಿಂದ ನಿಮ್ಮ ಕೌಶಲ್ಯದಿಂದ ರೋಗಿಗಳ ಸೇವೆ ಮಾಡಿ ಸಮಾಜಕ್ಕೆ ಕೀರ್ತಿ ತರುವಂತೆ ಪ್ರಯತ್ನಿಸಬೇಕು,” ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಜ್ಞಾನೇಶ್ವರಿ, ಶ್ರೀ ಪ್ರಶಾಂತ್, ಶ್ರೀ ವೀರೇಶ್ ಅವರು ಅತಿಥಿಗಳಾಗಿ ಭಾಗಿಯಾಗಿ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶಗಳನ್ನು ನೀಡಿದರು.
ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಇರ್ಷಾದ್ ಕೆ. ಅತ್ತಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಶುಭಾಶಯಗಳನ್ನು ತಿಳಿಸಿದರು. ನಂತರ ತೃತೀಯ ವರ್ಷದ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ನಂತರ ಮಧ್ಯಾಹ್ನ ಪ್ರೀತಿಯ ಭೋಜನ ಏರ್ಪಡಿಸಲಾಗಿದ್ದು, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿದ್ಯಾರ್ಥಿಗಳು ನೀಡಿದ ಮನಮೋಹಕ ಸಾಂಸ್ಕೃತಿಕ ಪ್ರದರ್ಶನದಿಂದ ಕಾರ್ಯಕ್ರಮ ಮನರಂಜನೆಗೊಳಿಸಿ ಯಶಸ್ವಿಯಾಗಿ ಮುಗಿಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಇರ್ಫಾನ್ ಕೆ ಅತ್ತಾರ್ ರವರು ಮತ್ತು ಕಾರ್ಯದರ್ಶಿಗಳಾದ ಇರ್ಷಾದ್ ಕೆ, ನರ್ಸಿಂಗ್ ವಿಭಾಗದ ಪ್ರಾಂಶುಪಾಲರಾದ ಸಿರಿಲ್ ಜಿ, ಫಾರ್ಮಸಿ ಪ್ರಾಂಶುಪಾಲರಾದ ವಸಿಂ ಹುಸೇನ್, ಪ್ಯಾರಾ ಮೆಡಿಕಲ್ ಪ್ರಾಂಶುಪಾಲರಾದ ಚಕ್ರವರ್ತಿ, ಎಲ್ಲ ವಿಭಾಗದ ಉಪನ್ಯಾಸಕರು ಹಾಗೂ ವಿದ್ಯಾರ್ಥಿ ಉಪಸ್ಥಿತರಿದ್ದರು


