ಸಿಂಧನೂರು : ಉಮ್ರಾ ಯಾತ್ರೆ ಕೈಗೊಂಡ ತಾಲ್ಲೂಕಿನ ೭೦ ಯಾತ್ರಾರ್ಥಿಗಳಿಗೆ ಸೋಮವಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುಗೌಡ ಬಾದರ್ಲಿ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಸನ್ಮಾನಿಸಿ ಬೀಳ್ಕೊಟ್ಟರು.
ನಂತರ ಬಾಬುಗೌಡ ಬಾದರ್ಲಿ ಮಾತನಾಡಿ, ಧಾರ್ಮಿಕ ಪುಣ್ಯಕ್ಷೇತ್ರಗಳ ದರ್ಶನದಿಂದ ಮಾನಸಿಕ ನೆಮ್ಮದಿ ದೊರೆಯುವುದರ ಜೊತೆಗೆ ಶಾಂತಿ, ಸಾಮರಸ್ಯದ ಭಾವನೆ ಮೂಡುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕೆಡಿಪಿ ಸದಸ್ಯ ಶಫೀವುಲ್ಲಾಖಾನ್, ಕಾಂಗ್ರೆಸ್ ಮುಖಂಡರಾದ ರಾಜುಗೌಡ ಬಾದರ್ಲಿ, ಎಂ.ಲಿಂಗಪ್ಪ
ದಢೇಸೂಗುರು, ಎನ್.ಅಮರೇಶ, ಖಾಜಿಮಲಿಕ್ ವಕೀಲ, ಸೈಯದ್ ಹಾರೂನ್‌ಪಾಷಾ ಜಾಹಗೀರ್‌ದಾರ್, ಶಬ್ಬೀರ್ ಅಹ್ಮದ್ ನಾಯಕ ಸೇರಿದಂತೆ ಉಮ್ರಾ ಯಾತ್ರಾರ್ಥಿಗಳು ಇದ್ದರು.
  ನಂತರ ಮೌಲಾನಾ ಅಜರುದ್ದೀನ್ ರಬ್ಬನಾ ನೇತೃತ್ವದಲ್ಲಿ ಸಿಂಧನೂರು ತಾಲ್ಲೂಕಿನ ೭೦ ಜನರು ಉಮ್ರಾ ಪ್ರವಾಸ ಕೈಗೊಂಡರು

Leave a Reply

Your email address will not be published. Required fields are marked *