ಮಾನ್ವಿ: ತಾಲೂಕಿನ ಚಾಹಪುಡಿ ಕ್ಯಾಂಪಿನಲ್ಲಿ ಶನಿವಾರ ಬೆಳಗಿನ ಜಾವ ಗ್ರಾಮದ ನಿವಾಸಿ ಸಿದ್ದಪ್ಪ ಎನ್ನುವವರ ಮನೆಯ ಹತ್ತಿರದ ಬಯಲು ಜಾಗದಲ್ಲಿ ಕಟ್ಟಲಾದ ಕೋಣಗರುವಿನ ಮೃತ ದೇಹ ಪತ್ತೆಯಾಗಿದ್ದು ಕೋಣಗರುವಿನ ಮೇಲೆ ಚಿರತೆ ದಾಳಿ ಮಾಡಿರುವ ಶಂಕೆ ಗ್ರಾಮಸ್ಥಾರಲ್ಲಿ ಮೂಡಿದ್ದು ಗ್ರಾಮದ ಜನರು ಭಯಭೀತರಾಗಿದ್ದಾರೆ ಮಾಹಿತಿ ತಿಳಿಯುತ್ತಲೆ ಗ್ರಾಮಕ್ಕೆ ಆರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಮಹೇಶ ಭೇಟಿ ನೀಡಿ ಪರಿಶೀಲಿಸಿ ಕ್ಯಾಂಪಿನ ಸುತ್ತ ಮುತ್ತ ಕೃಷಿ ಜಮೀನಿದ್ದು ಹತ್ತಿರದಲ್ಲಿ ಗುಡ್ಡ ಪ್ರದೇಶವಿರುವುದರಿಂದ ಚಿರತೆ ಅಡಗಿರುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ರಾತ್ರಿ ವೇಳೆ ಗ್ರಾಮಸ್ಥಾರು ಒಬ್ಬರೆ ತಿರುಗಾಡುವುದು ಹಾಗೂ ತಮ್ಮ ಚಿಕ್ಕಮಕ್ಕಳನ್ನು ಒರಗಡೆ ಬಿಡುವುದನ್ನು ಮಾಡಬರಾದು ಜಾನುವಾರುಗಳನ್ನು ಬಯಲಿನಲ್ಲಿ ಬಿಡದೆ ಸುರಕ್ಷಿತವಾದ ಪ್ರದೇಶದಲ್ಲಿ ಬಿಡಬೇಕು ಎಂದು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಪಶುವೈದ್ಯಧಿಕಾರಿ ಡಾ.ಅಭಿ ಕೋಣಗರುವಿನ ಮರಣೋತ್ತರ ಪರೀಕ್ಷೆ ನಡೆಸಿ ಸಾವಿನ ಬಗ್ಗೆ ಖಚಿತವಾದ ಮಾಹಿತಿ ವರದಿಯನ್ನು ನೀಡುವುದಾಗಿ ತಿಳಿಸಿದರು.
ಅರಣ್ಯ ಇಲಾಖೆಯ ಗಸ್ತು ಅರಣ್ಯಪಾಲಕ ಕೆಂಚಪ್ಪ ಗ್ರಾಮದ ನಿವಾಸಿ ಸಿದ್ದಪ್ಪ ಸೇರಿದಂತೆ ಇನ್ನಿತರರು ಇದ್ದರು.
ಮಾನ್ವಿ: ತಾಲೂಕಿನ ಚಾಹಪುಡಿ ಕ್ಯಾಂಪಿನಲ್ಲಿ ಶನಿವಾರ ಬೆಳಗಿನ ಜಾವ ಗ್ರಾಮದ ನಿವಾಸಿ ಸಿದ್ದಪ್ಪ ಎನ್ನುವವರ ಮನೆಯ ಹತ್ತಿರ ಕೋಣಗರುವಿನ ಮೃತದೇಹವನ್ನು ಪರಶೀಲಿಸುತ್ತಿರುವ ಅರಣ್ಯಾಧಿಕಾರಿಗಳು.

