ದೇವದುರ್ಗ : ಪ್ರತಿಯೊಬ್ಬರು ಯೇಸುಕ್ರಿಸ್ತನ ಜೀವನ ಸಂದೇಶಗಳೊಂದಿಗೆ ಕರುಣೆ, ಶಾಂತಿ ಮತ್ತು ಸಹನೆಯನ್ನು ಅಳವಡಿಸಿಕೊಳ್ಳಬೇಕು. ಜೊತೆಗೆ ಆತನ ವಾಕ್ಯಗಳನ್ನು ಸಂದೇಶಗಳನ್ನು ಪಾಲಿಸಬೇಕೆಂದು ಮೆಥೋಡಿಸ್ಟ್ ಚರ್ಚಿನ ಫಾದರ್ ಮಾರ್ಕೇಶ್ ತಿಳಿಸಿದರು.
ತಾಲೂಕಿನ ಹೊನ್ನಟಗಿ ಮೆಥೋಡಿಸ್ಟ್ ಚರ್ಚ್ ಆವರಣದಲ್ಲಿ ಗುರುವಾರ ಕ್ರಿಸ್ತ ಜಯಂತಿಯಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸಂದೇಶ ಸಾರಿದರು.
ಯೇಸುಕ್ರಿಸ್ತನು ಈ ಲೋಕದ ಒಳಿತಿಗಾಗಿ ಶಿಲುಬೆಯ ಮೇಲೆ ಪ್ರಾಣವನ್ನು ಅರ್ಪಿಸಿದನು. ಮತ್ತೆ ಮೂರು ದಿನದಲ್ಲಿ ಪುನರ್‌ಜನ್ಮ ತಾಳಿದನು. ಮಿತ್ಯ ಮಾರ್ಗ ಬಿಟ್ಟು ಸತ್ಯ ಮಾರ್ಗಗದಲ್ಲಿ ನಡಿಯಬೇಕೆಂದರು. ಯುವಕರು ದುಶ್ಚಟದಿಂದ ದೂರ ಇರಬೇಕು. ಮದ್ಯ ವ್ಯಸನಿಯಾಗಬಾರದು. ಸನ್ಮಾರ್ಗದಲ್ಲಿ ನಡೆದು ಒಳ್ಳೆಯ ಜೀವನ ನಡೆಅಬೇಕೆಂದು ಫಾದರ್ ಮಾರ್ಕೇಶ್ ತಿಳಿಸಿದರು.
ಈ ಸಂದರ್ಭದಲ್ಲಿ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಪ್ರಕಾಶ ಹೊನ್ನಟಗಿ, ವಿಶ್ವಾಸಿಗಳಾದ ಯಲ್ಲಪ್ಪ, ಹನುಮಂತರಾಯ, ದೊಡ್ಡ ಅಬ್ರಾಮಪ್ಪ, ಅಬ್ರಾಮಪ್ಪ, ಬೂದೆಪ್ಪ, ಬಾಬು, ಭೀಮಣ್ಣ ಹದ್ದಿನಾಳ, ಪ್ರಜ್ವಲ್, ಮಹೇಶ್, ಅನಿಲ ಕುಮಾರ್, ವಿರೇಶ್, ಬಾಬು ಕರಡಿ, ಗಂಗಪ್ಪ, ಹನುಮಂತ ಕರಡಿ, ಖಾನ್ ಸಾಬ್, ಮರಿಯಾಳಮ್ಮ, ಗುರುದೇವಮ್ಮ, ಅನುರಾದಮ್ಮ, ಲಲಿತಮ್ಮ, ಲಕ್ಷ್ಮೀ, ಬೂದೆಮ್ಮ ಗೀತಮ್ಮ, ಗಂಗಮ್ಮ, ನರಸಮ್ಮ ಯಲ್ಲಮ್ಮ, ಬಾಬಾಮ್ಮ ಮತ್ತು ಸಭೆಯ ಉಗ್ರಾಣಿಕರು ಸೇರಿದಂತೆ ಸಭೆಯ ವಿಶ್ವಾಸಿಗರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *