ತಾಳಿಕೋಟಿ ತಾಲೂಕಿನ ಚಬನೂರ ಹಿರೇಮಠದ ಪೀಠಾಧಿಪತಿ ಜ್ಯೋತಿಷ್ಯ ರತ್ನ ಪರಮ ಪೂಜ್ಯ ರಾಮಲಿಂಗಯ್ಯ ಮಹಾಸ್ವಾಮಿಗಳಿಗೆ ಅವರ ಧಾರ್ಮಿಕ ಸೇವಾ ಕಾರ್ಯಗಳಿಗಾಗಿ ಸುರಪೂರ ತಾಲೂಕಿನ ನಗನೂರು ಗುಡ್ಡದ ಗುರುಲಿಂಗೇಶ್ವರ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಧರ್ಮಸಭೆ ಕಾರ್ಯಕ್ರಮದಲ್ಲಿ ಗೌರವ ಸಮರ್ಪಣೆ ಸಲ್ಲಿಸಲಾಯಿತು. ನಾಡಿನ ಪೂಜ್ಯ ಮಠಾಧೀಶರು ಹಾಗೂ ಗಣ್ಯ ಮಾನ್ಯರು ಉಪಸ್ಥಿತರಿದ್ದರು.

