ಪೋತ್ನಾಳ್ -: ಸಮೀಪದ ಮಾನವಿ ತಾಲೂಕಿನ ಉಟಕನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 2025-26-27ನೇ ಸಾಲಿನ 15ನೇ ಹಣಕಾಸು ಆಯೋಗದ ಅನುದಾನ, ಎಸ್ಬಿಎಂ ಖಾತೆ ಹಾಗೂ ನಂಬರ್-01 ಖಾತೆಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಉಟಕನೂರು ಗ್ರಾಮ ಪಂಚಾಯತಿ ನಾಗರಿಕರ ವೇದಿಕೆ ಗ್ರಾಮಸಭೆ, ವಾರ್ಡ್ ಸಭೆ ಹಾಗೂ ಸಾಮಾನ್ಯ ಸಭೆಗಳನ್ನು ನಡೆಸದೇ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಆರೋಪಿಸಿ, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.
ಈ ಸಂಬಂಧ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಗಿದ್ದು, ಜೂನ್ 17ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಉಟಕನೂರು ಗ್ರಾಮ ಪಂಚಾಯತಿ ಕಾರ್ಯಾಲಯದ ಮುಂದೆ ಪ್ರತಿಭಟನೆ ಹಾಗೂ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ನಡೆಸಲು ಮುಂದಾಗಿದ್ದು ಈ ಧರಣಿಯಲ್ಲಿ ಮೂಲ ಸೌಲಭ್ಯ ವಂಚಿತ ಎಲ್ಲಾ ಗ್ರಾಮದ ಸಾರ್ವಜನಿಕರು, ಮುಖಂಡರು, ಪ್ರಜ್ಞಾವಂತ ಯುವಕರು, ವಿವಿಧ ಸಂಘ ಸಂಸ್ಥೆಗಳು ಭಾಗವಹಿಸಿ ಭ್ರಷ್ಟಾಚಾರ ಮಾಡಿದ ಅಧಿಕಾರಿಗಳಿಗೆ ತಕ್ಕ ಶಿಕ್ಷೆ ಹಾಗೂ ಕಬಳಿಕೆ ಮಾಡಿದ ಹಣ ಮತ್ತೆ ಪಂಚಾಯತಿ ಖಜಾನೆ ಸೇರಿ ಅಭಿರುದ್ಧಿ ಕಾರ್ಯಗಳು ನಡೆಯಲು ಸಹಕಾರಿ ಆಗುವಂತೆ ಮಾಡಲು ಹೋರಾಟದ ಮೂಲಕ ಬಿಸಿ ಮುಟ್ಟಿಸಲು ಈ ಕಾರ್ಯಕ್ರಮ ಯಶಸ್ವಿಗೊಳಿಸಲು
ಹೋರಾಟಗಾರರಾದ ಮಲ್ಲು ನಾಯಕ ತಡಕಲ್, ಬಸವರಾಜ ಬಾಗಲವಾಡ, ಮಹಾಂತೇಶ ನಾಯಕ ತಡಕಲ್ ಮನವಿ ಮಾಡಿದ್ದಾರೆ.

