ಹಾಲಾಪೂರ: ಇಂದು ದೇಶಾದ್ಯಂತ ಬಹಳಷ್ಟು ಪ್ರಚಲಿತ ವಿಷಯವಾಗಿ ಎಲ್ಲರಲ್ಲೂ ಚರ್ಚೆಗೆ ಗ್ರಾಸವಾದದ್ದು SIR ಎಂಬದು,
ಚುನಾವಣಾ ಆಯೋಗ ವತಿಯಿಂದ ಮತದಾರರ ಪಟ್ಟಿಯನ್ನು ಪರಿಷ್ಕರಿಸಲು ಮತ್ತು ಶುದ್ದಿಕರಿಸಲು ಕೈಗೊಂಡಿರುವ ಪ್ರಕ್ರಿಯೆ SIR ( Special Intensive Revision) ವಿಶೇಷ ಸಮಗ್ರ ಪರಿಷ್ಕರಣೆ ಇದರ ಮುಖ್ಯ ಉದ್ದೇಶವಾಗಿ ಇಂದು ಹಾಲಾಪೂರದ ನಾಡ ಕಛೇರಿ, ಗ್ರಾಮ ಪಂಚಾಯತಿ, ಶಾಲಾ ಶಿಕ್ಷಕರು ಮಕ್ಕಳಿಂದ ಪ್ರಮುಖ ಬೀದಿಗಳಲ್ಲಿ ಮತದಾರರಿಗೆ ಜಾಗೃತಿ ಜಾಥಾ ಮಾಡಲಾಯಿತು. ನಂತರ ಮುಖ್ಯ ಶಿಕ್ಷಕ ಮಂಜುನಾಥ ಹಾಲಾಪೂರ ಮಾತನಾಡಿ ಚುನಾವಣಾ ಆಯೋಗ ವಿಶೇಷ ಶೀರ್ಷಿಕೆಯ ಅಡಿಯಲ್ಲಿ ಜಾರಿಗೆ ತಂದಿರುವ ಪ್ರಕ್ರಿಯೆಯೇ “ವಿಶೇಷ ಸಮಗ್ರ ಪರಿಷ್ಕರಣೆ SIR” ಎಂಬ ಮತದಾರರ ಪಟ್ಟಿ ಶುದ್ದಿಕರಿಸುವುದು,ಬೂತ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಬೇಟಿ ನೀಡಿ ನಿಖರ ಮಾಹಿತಿ ಸಂಗ್ರಹ ಮಾಡಲು ಬಂದಾಗ ಸರಿಯಾಗಿ ಮಾಹಿತಿ ಕೊಟ್ಟು ಸಹಕರಿಸಬೇಕು ಇದಕ್ಕೆ ಎಲ್ಲರ ಅವಶ್ಯಕತೆ ಇದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಾದಿಕಾರಿ ಕೃಷ್ಣಪ್ಪ , ಗ್ರೇಡ್ ಒನ್ ಸೆಕ್ರೆಟರಿ ರಮೇಶ , ಪರಮಣ್ಣ, ಗ್ರಂಥಪಾಲಕ ಗ್ಯಾನಪ್ಪ ದೊಡ್ಡಮನಿ ಹಾಗೂ ಶಿಕ್ಷಕ ಶಿಕ್ಷಕಿಯರು ಇದ್ದರು.

