ಸಿರವಾರ: ತಾಲೂಕಿನ ಬಾಗಲವಾಡ ಗ್ರಾಮದ ರಂಜನ್ ಬೀ ತಂದೆ ರಹಿಮಾನ್ ಸಾಬ್ ಶ್ರಾವಣ-ವಾಕ್ ದೋಷ ಹೊಂದಿರುವ ವಿಕಲಚೇತನೆ ಬಾಲಕಿಯಾಗಿದ್ದು.
ಇವರ UDID (ವಿಕಲಚೇತನರ ವಿಶೇಷ ಗುರುತಿನ ಚೀಟಿ) ಸಿಗದೇ 2020ರಿಂದ ಇಲ್ಲಿಯವರೆಗೆ ಸುಮಾರು 20–30 ಬಾರಿ RIMS ಆಸ್ಪತ್ರೆಗೆ ಓಡಾಡಿದರೂ ಕೂಡಾ ಕೆಲಸ ಪೂರ್ಣವಾಗಿಲ್ಲ.
ಜಿಲ್ಲಾ ಆಡಳಿತ ಹಾಗೂ ಆರೋಗ್ಯ ಇಲಾಖೆಯ ಗಂಭೀರ ಗಮನ ಸೆಳೆಯುವಂತಹ ವಿಷಯ.

ರಂಜನ್ ಬೀ ಕುಟುಂಬದ ಮನಕಲಕುವ ಹಾದಿ
ಈ ಹುಡುಗಿಗೆ UDID ಅಗತ್ಯವಾದ ಕಾರಣ, ತಂದೆ-ತಾಯಿ ನಾಲ್ಕೂ ವರ್ಷಗಳಿಂದ ನಿರಾಶೆಯಿಂದಲೂ, ತಾಳ್ಮೆಯಿಂದಲೂ ದಾಖಲಾತಿ ಕೆಲಸಕ್ಕಾಗಿ RIMS ಆಸ್ಪತ್ರೆ ಹಾಗೂ ಸಂಬಂಧಿತ ವಿಭಾಗಗಳ ಬಾಗಿಲು ತಟ್ಟುತ್ತಿದ್ದಾರೆ. ಆದರೆ ಪ್ರತಿಬಾರಿ “ಮುಂದಿನ ತಿಂಗಳು ಬನ್ನಿ”, “ಮೂರನೇ ತಾರೀಖು ಬನ್ನಿ” ಎಂಬ ಉತ್ತರವೇ ಸಿಗುತ್ತಿದೆ.

ವೈದ್ಯರ ಮಾತು — ಕುಟುಂಬದ ನೋವಿಗೆ ಕಾರಣ

ಪೋಷಕರು ಹೇಳುವುದೇನಂದರೆ:
“ಡಾಕ್ಟರ್‌ಗಳಿಗೆ Report ಕೊಡಬೇಕಂದ್ರೆ — ‘ಹುಡುಗಿ ನಿದ್ದೆ ಮಾಡಬೇಕು’ ಅಂತ ಹೇಳ್ತಾರೆ. ಸ್ವಲ್ಪ ಅವಳಿಗೆ ತೊಂದರೆ ಆದ್ರು ಕೂಡಾ ‘ಇವತ್ತು ಆಗಲ್ಲ, ಮುಂದಿನ ತಿಂಗಳು 3ರಕ್ಕೆ ಬನ್ನಿ’ ಅಂತ ಮುಂದೂಡ್ತಾರೆ. ಅವರು ಹೇಳಿದ ದಿನಕ್ಕೆ ಹೋದ್ರು ಮತ್ತೆ ಮತ್ತೊಂದು ಕಾರಣ ಹೇಳ್ತಾರೆ.”

ಹೀಗೆ ನಾಲ್ಕು ವರ್ಷಗಳಿನಿಂದ ಕೇವಲ ದಿನಾಂಕ ಬದಲಾವಣೆ, ತಳ್ಳಾಟ, ಲೋಪ — ಆದರೆ ಕೆಲಸ ಇನ್ನೂ ಆಗಿಲ್ಲ.

ಜಿಲ್ಲಾಡಳಿತಕ್ಕೆ ಮನವಿ

ವಿಕಲಚೇತನರ ಕುಟುಂಬಗಳಿಗೆ UDID ಮಹತ್ವದ ದಾಖಲೆ. ಪಿಂಚಣಿ, ವೈದ್ಯಕೀಯ ನೆರವು, ಸರ್ಕಾರಿ ಕಲ್ಯಾಣ ಯೋಜನೆಗಳು — ಎಲ್ಲಕ್ಕೂ ಇದು ಮೂಲ. ಇಂತಹ ಮಕ್ಕಳನ್ನು ತಿಂಗಳತನಕ, ವರ್ಷಗಳತನಕ ಓಡಾಡಿಸುವುದು ಮಾನವೀಯವಾಗಿಯೂ ಸರಿ ಅಲ್ಲ.

ಈ ವಿಷಯವನ್ನು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹಾಗೂ RIMS ಮೇಲ್ದರ್ಜೆ ಅಧಿಕಾರಿಗಳು ತುರ್ತಾಗಿ ಪರಿಶೀಲಿಸಿ, ಈ ವಿಕಲಚೇತನೆ ಹುಡುಗಿಗೆ UDID ಮಂಜೂರು ಮಾಡುವ ಕ್ರಮ ಕೈಗೊಳ್ಳಲು ವಿನಂತಿ.

Leave a Reply

Your email address will not be published. Required fields are marked *