ಕವಿತಾಳ : ಪಟ್ಟಣ ಸಮೀಪದ ಅಮೀನಗಡ ಗ್ರಾಮದ ಹುಚ್ಚರಡ್ಡಿ ಎಂಬುವವರಿಗೆ ಸೇರಿದ ಕುರಿಹಟ್ಟಿಯ ಮೇಲೆ ತೋಳದಾಳಿ ಮಾಡಿ ಸುಮಾರು ೨೫ಕ್ಕೂ ಹೆಚ್ಚು ಕುರಿಗಳನ್ನು ತಿಂದು ಹಾಕಿದ್ದು ಕುರಿಗಾಯಿ ನಷ್ಟ ಅನುಭವಿಸುವಂತಾಗಿದೆ, ಕುರಿಗಳ ಸಾವಿನಿಂದ ಕಂಗೆಟ್ಟಿರುವ ಕುರಿಗಾಯಿಗಳಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಸ್ಥಳಕ್ಕೆ ಪಾಮನಕಲ್ಲೂರು ಪಶುವೈದ್ಯಾಧಿಕಾರಿ ಡಾ.ಸುಬ್ಬಯ್ಯ ಭೇಟಿ ನೀಡಿ ಪರಶೀಲಿಸಿದ್ದು ಮುಂದಿನ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

