ಬಳಗಾನೂರು: ಪಟ್ಟಣದ ಬೃಹನ್ಮಠದಲ್ಲಿ ಮಾನವ ಧರ್ಮಉದ್ಧಾರಕ್ಕಾಗಿ ಸಮಸ್ತ ಭಕ್ತರ ಕಲ್ಯಾಣಕ್ಕಾಗಿ ಲಿಂ। ಪಂಪಾಪತಿ ಶಿವಾಚಾರ್ಯರ 29 ನೇ ಪುಣ್ಯಾರಾಧನೆ ಅಂಗವಾಗಿ ಉಜ್ಜಯನಿ ಸಿದ್ಧಲಿಂಗಭಗವತ್ಪಾದರ ಮಹಾಪುರಾಣ ಪ್ರವಚನ ಕಾರ್ಯಕ್ರಮ ನಂ 21 ಶುಕ್ರವಾರದಿಂದ ಡಿ. 2 ರವರೆಗೆ ಪ್ರತಿದಿನ ಸಾಯಂಕಾಲ 7 ಗಂಟೆಯಿಂದ 9 ಗಂಟೆಯ ವರೆಗೆ ಶ್ರೀಮಠದ ಶ್ರೀವೀರಭದ್ರ ಶಿವಾಚಾರ್ಯರ ನೇತೃತ್ವದಲ್ಲಿ ಜರುಗಲಿದೆ ಎಂದು ಶ್ರೀಮಠದಸದ್ಭಕ್ತರು ತಿಳಿಸಿದ್ದಾರೆ.
ಪ್ರವಚನಕಾರರಾದ ಹುಲ್ಲೂರು ಬಾಚಿಗುಡ್ಡ ಸಂಗಮೇಶ ಶಾಸ್ತ್ರಿ,ಪುರಾಣ ವಾಚನಕಾರರು ಹುಲ್ಲೂರು ಪತ್ರೆಯ್ಯಸ್ವಾಮಿ ಹಿರೇಮಠ, ತಬಲಾವಾದಕರಾಗಿ ಜಂತಲಿ ಮಹಾಂತೇಶ ಸೇರಿ ಪುರಾಣ ಪ್ರವಚನ ಕಾರ್ಯಕ್ರಮವನ್ನು ನೆರವೆರಿಸಲಿದ್ದಾರೆ. ಪ್ರತಿದಿನಪುರಾಣ ಶ್ರವಣಾರ್ಥಿಗಳಾಗಿ ಬರುವ ಸಕಲ ಸದ್ಭಕ್ತರಿಗೆ ಪ್ರಸಾದದ ವ್ಯವಸ್ಥೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಜರುಗಲಿವೆ.
ನಂ 30 ರಂದು ರವಿವಾರ ಬ್ರಹ್ಮೀಮೂಹುರ್ತದಲ್ಲಿ ಲಿಂ| ಶ್ರೀಪಂಪಾಪತಿ ಶಿವಾಚಾರ್ಯರ ಶಿಲಾಮೂರ್ತಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಪೂಜಾಕಾರ್ಯಕ್ರಮಗಳುಜರಗುವುವು.ಡಿ. 02-ಮಂಗಳವಾರ ಶ್ರೀಗಳ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ, ಜಂಗಮವಟುಗಳಿಗೆ ಅಯ್ಯಾಚಾರ ದೀಕ್ಷೆ ನಂತರ ಸುಮಂಗಲೆಯರಿಂದ ಕುಂಭೋತ್ಸವ ಸಂಸ್ಥಾನಮಠದ ಗಜಲಕ್ಷ್ಮೀಯಿಂದೊಡಗೂಡಿ (ಆನೆೆ) ನಂದಿಕೋಲು ವೀರಗಾಸೆ, ಭಜನಾ ಸೇವಾದೊಂದಿಗೆ ಭೂರಿ ಮೆರವಣಿಗೆ ಮಧ್ಯಾಹ್ನ ಸಕಲ ಸದ್ದಕ್ಷರಿಗೆ ಪ್ರಸಾದ ವಿತರಣೆ ಮಧ್ಯಾಹ್ನ 2 ಗಗಂಟೆಯಿಂದ ಪುರಾಣ ಮಹಾಮಂಗಲದ ಕಾರ್ಯಕ್ರಮಗಳು ಹರಗುರು ಚರಮೂರ್ತಿಗಳು, ಜನಪ್ರತಿನಿಧಿಗಳು ಆಗಮಿಸಲಿದ್ದಾರೆ ಕಾರ್ಯಕ್ರಮದಲ್ಲಿ ಶ್ರೀಮಠದ ಸದ್ಭಕ್ತರು ಪಾಲ್ಗೊಳ್ಳುವಂತೆ ಶ್ರೀಗಳು ತಿಳಿಸಿದ್ದಾರೆ.

ಬಳಗಾನೂರು: ಲಿಂ| ಶ್ರೀಪಂಪಾಪತಿ ಶಿವಾಚಾರ್ಯರ ಶಿಲಾಮೂರ್ತಿ

Leave a Reply

Your email address will not be published. Required fields are marked *