ಸಿಂಧನೂರು : ಜ 9 ತಾಲೂಕು ಪತ್ರಿಕೋದ್ಯಮದ ಇತಿಹಾಸದಲ್ಲಿಯೇ ಕರ್ನಾಟಕ ರಾಜ್ಯ ಸರಕಾರದ ಮಾದ್ಯಮ ಅಕಾಡೆಮಿಯಿಂದ ಅತ್ಯುತ್ತಮ ವರದಿಗೆ ನೀಡುವ ರಾಜ್ಯಮಟ್ಟದ ಅಭಿಮನ್ಯು ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿರುವ ವಿಜಯ ಕರ್ನಾಟಕ ದಿನಪತ್ರಿಕೆಯ ವಸ್ತುನಿಷ್ಠ, ಜನಪರ ಕಾಳಜಿಯ ಬರಹಗಾರರು ಶ್ರೀ ಚಂದ್ರಶೇಖರ ಬೆನ್ನೂರು ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ನಿಮ್ಮ ದಶಕದ ನೈಜ, ವಸ್ತುನಿಷ್ಠ ಬರಹಗಳಿಗೆ ಸ್ಪೂರ್ತಿ ಸಿಕ್ಕಿದ್ದು, ನಿಮ್ಮ ಸೇವೆ ನಿರಂತರವಾಗಿ ಸಾಗಲಿ. ಪತ್ರಿಕಾ ಕ್ಷೇತ್ರದಲ್ಲಿ ಸಿಂಧನೂರಿನ ಕೀರ್ತಿಯನ್ನು ರಾಜ್ಯಮಟ್ಟಕ್ಕೆ ತಲುಪುವಂತೆ ಮಾಡಿದ ನಿಮಗೆ ನಮ್ಮ ನೈಜ್ಯ ದೆಸೆ ದಿನ ಪತ್ರಿಕೆಯ ವತಿಯಿಂದ ಪ್ರಶಂಸೆ

