ಮಾನ್ವಿ: ತಾಲೂಕಿನ ಪೋತ್ನಾಳ್ ಗ್ರಾಮದಲ್ಲಿನ ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ನವದೆಹಲಿ ಹಾಗೂ ಪರ್ಯಾವರಣ ಟ್ರಸ್ಟ್ ಶಿವಮೊಗ್ಗ,ನಿರ್ಮಲ ತುಂಗಭದ್ರಾ ಅಭಿಯಾನ ಸಮಿತಿ ಸಂಯುಕ್ತಾಶ್ರಯದಲ್ಲಿ ನಡೆದ ನಿರ್ಮಲ ತುಂಗಭದ್ರಾ ಅಭಿಯಾನ 3 ನೇ ಹಂತದ ಜಲಜಾಗೃತಿ-ಜನಜಾಗ್ರತಿ ಪಾದಯಾತ್ರೆ ಕಾರ್ಯಕ್ರಮದ ವೇದಿಕೆ ಕಾರ್ಯಕ್ರಮಕ್ಕೆ 3 ನೇ ಹಂತದ ನಿರ್ಮಲ ತುಂಗಭದ್ರಾ ಅಭಿಯಾನ ಸಂಚಾಲಕರಾದ ಮಹಿಮಾ ಪಾಟೀಲ್ ಉದ್ಘಾಟಿಸಿ ಮಾತನಾಡಿ ದೇಶದಲ್ಲಿನ 16 ಸಾವಿರ ನದಿಗಳಲ್ಲಿ 6 ಸಾವಿರ ನದಿಯ ಮೂಲ ಉಗಮ ಸ್ಥಾನಗಳು ನಿರಂತರ ಪರಿಸರದ ಮೇಲಿನ ಮಾನವರ ದಾಳಿ ಹಾಗೂ ಮಾಲಿನ್ಯದಿಂದಾಗಿ ಕಣ್ಮರೆಯಾಗಿವೆ ರಾಜ್ಯದಲ್ಲಿ ಇದ್ದ 36 ನೈಸರ್ಗಿಕ ಕೇರೆಗಳಲ್ಲಿ ಇಂದು ಕೇವಲ 3 ಸಾವಿರ ಕೆರೆಗಳು ಮಾತ್ರ ಉಳಿದುಕೊಂಡಿವೇ. ರಾಜ್ಯದಲ್ಲಿ ಹರಿಯುವ ಪ್ರಮುಖ ನದಿಗಳಾದ ತುಂಗಭದ್ರ ಪಶ್ಚಿಮ ಘಟದಲ್ಲಿನ ಶೃಂಗೇರಿಯಿಂದ 15 ಕಿ.ಮೀ.ದೂರದ ವರಹ ಪರ್ವತದಲ್ಲಿನ ಗಂಗಡಿಯಲ್ಲಿ ಉಗಮವಾಗುತ್ತದೆ ಹಾಗೂ 718 ಕಿ.ಮೀ ಹರಿದು ಸಮುದ್ರವನ್ನು ಸೇರುತ್ತದೆ ರಾಜ್ಯದಲ್ಲಿ 693 ಕಿ.ಮೀ. ತುಂಗಭದ್ರ ನದಿ ಹರಿಯುತ್ತದೆ.ಕೃಷ್ಣ ನದಿ 483 ಕಿ.ಮೀ, ಕಾವೇರಿ ನದಿ 320 ಕಿ.ಮೀ.ಹರಿಯುತ್ತದೆ ರಾಜ್ಯದಲ್ಲಿ ಹೆಚ್ಚಿನ ವಿಸ್ತೀರ್ಣದಲ್ಲಿ ಹರಿಯುವ ತುಂಗಭದ್ರ ನದಿ ಯ ಉಗಮ ಸ್ಥಾನದಲ್ಲಿ ಅನೇಕ ಯೋಜನೆಗಳ ಒತ್ತಡ, ತುಂಗಭದ್ರ ನದಿ ತೀರದಲ್ಲಿನ ಶೃಂಗೇರಿಯಿಂದ ಹರಿಹರದ ವರೆಗಿನ ಅತಿಹೆಚ್ಚಿನ ಪುಣ್ಯ ಕ್ಷೇತ್ರಗಳಿರುವುದರಿಂದ ಇಂತಹ ಕ್ಷೇತ್ರಗಳಿಗೆ ಪ್ರತಿನಿತ್ಯ ಲಕ್ಷಾಂತರ ಭಕ್ತರು ಆಗಮಿಸುವುದರಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಂಸ್ಕಾರಿಸಿ ನದಿಗೆ ಬಿಡದೆ ಇರುವುದರಿಂದ ಹಾಗೂ ನದಿ ತೀರದಲ್ಲಿನ ನಗರ.ಪಟ್ಟಣಗಳ ತ್ಯಾಜ್ಯವನ್ನು ಸಂಸ್ಕಾರಿಸಿ ನದಿಗೆ ಬಿಡದೆ ನೇರವಾಗಿ ಬಿಡುತ್ತಿರುವುದರಿಂದ ನದಿಯ ನೀರು ಇಂದು ಕುಡಿಯುವುದಕ್ಕೂ ಕೂಡ ಯೋಗ್ಯವಾಗಿ ಉಳಿದಿಲ್ಲ.ನದಿಯನ್ನು ಭಾವನತ್ಮಕವಾಗಿ ನೋಡದೆ ಪರಿಸರತ್ಮಕವಾಗಿ ನೋಡಬೇಕು. ನಮ್ಮ ರಾಜ್ಯದಲ್ಲಿ ಉಳಿದಿರುವ ನದಿ,ಕೆರೆ,ಹಾಗೂ ನೀರಿನ ಜಲ ಮೂಲಗಳನ್ನು ಸ್ವಚ್ಚವಾಗಿ ಶುದ್ದವಾಗಿ ಉಳಿಸಿಕೊಳ್ಳಬೇಕಾಗಿದೆ ಅದ್ದರಿಂದ ನಿರ್ಮಲ ತುಂಗಭದ್ರಾ ಅಭಿಯಾನವನ್ನು 4 ಹಂತಗಳಲ್ಲಿ ಮಾಡಲಾಗುತ್ತಿದ್ದು 6ನೂರು ಕಿ.ಮೀ.ಪಾದಯಾತ್ರೆ ಮೂಲಕ ಜಲಜಾಗೃತಿ-ಜನಜಾಗ್ರತಿಯನ್ನು ಮೂಡಿಸುವುದರೊಂದಿಗೆ ಪಾದಯಾತ್ರೆಯಲ್ಲಿ ಭಾಗವಹಿಸಿರುವ ತಜ್ಞರು ತುಂಗಭದ್ರನದಿಯನ್ನು ಅಧ್ಯಾಯನ ಮಾಡಿ ವರದಿಯನ್ನು ಸಿದ್ದಪಡಿಸಿ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರಾದ ಬಸವರಾಜ್ ಪಾಟೀಲ್ ವೀರಾಪುರ ಮಾತನಾಡಿ ನಮ್ಮ ಸಂಸ್ಥೆಯು ದೇಶದಲ್ಲಿನ 80 ನದಿಗಳು ಅಪಾಯದಲ್ಲಿರುವುದನ್ನು ಗುರುತಿಸಿ ಅವುಗಳಲ್ಲಿ ಗಂಗೆ,ಯಮುನೆ,ಚಂಬಲ್, ಸೇರಿದಂತೆ ಇತರ ನದಿಗಳ ಸ್ವಚ್ಚತೆಗೆ ಕ್ರಮ ಕೈಗೊಳ್ಳಲಾಗಿದೆ ನಮ್ಮ ದೇಶದ ನದಿಗಳಿಗೆ ತನ್ನದೆ ಆದ ಇತಿಹಾಸ ಪವಿತ್ರ್ಯತೆ, ಹರಿಯುವ ಮಾರ್ಗ ಮತ್ತು ಸಮುದ್ರವನ್ನು ಸೇರುವ ಸಂಗನ ಸ್ಥಳವಿರುತ್ತದೆ ಅದ್ದರಿಂದ ನದಿಗಳ ಮಾರ್ಗ ಬದಲಾವಣೆ ಹಾಗೂ ನದಿಗಳ ಜೋಡಣೆ ಮಾಡುವುದರಿಂದ ನದಿಗಳ ಅಸ್ತಿತ್ವಕ್ಕೆ ದಕ್ಕೆ ಉಂಟಾಗುವುದರಿಂದ ಅಂದಿನ ಪ್ರದಾನಿ ಅಟಲ್ ಬಿಹಾರಿ ವಾಜಪೇಯಿಯವರಿಗೆ ನಮ್ಮ ಸಂಸ್ಥೆವತಿಯಿಂದ ವರದಿಯನ್ನು ನೀಡಿದರಿಂದ ನದಿಜೊಡಣೆಯನ್ನು ಬಿಟ್ಟು ಪ್ರವಾಹ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದೊರೆಯುವ ನೀರನ್ನು ಹರಸಿಕೊಳ್ಳುವುದಕ್ಕೆ ಪೈಪಲೈನ್ ಅಳವಡಿಸುವ ಯೋಜನೆಯನ್ನು ರೂಪಿಸಲಾಯಿತು. ನಮ್ಮ ದೇಶದ ಮೂಲವೇ ಧರ್ಮವಾಗಿದ್ದು .ಧರ್ಮದ ಆದಾರದ ಮೇಲೆ ಸಮಾಜ,ಸಮಾಜದ ಅಧಾರದ ಮೇಲೆ ಸರ್ಕಾರ ನಡೆಯುತ್ತದೆ. ನಮ್ಮ ಭಾರತದ ಸಂಸ್ಕೃತಿಯಲ್ಲಿ ನದಿಗಳಿಗೆ ಮಾತೃಸ್ಥಾನವನ್ನು ನೀಡಲಾಗಿದ್ದು ಅವುಗಳನ್ನು ಮುಂದಿನ ಪಿಳಿಗೆಗೆ ಉಳಿಸಿಕೊಳ್ಳುವ ಜವಾಬ್ದರಿ ಪ್ರತಿಯೊಬ್ಬರ ಮೇಲಿದೆ ಎಂದು ತಿಳಿಸಿದರು.
ದಿವ್ಯ ಸಾನಿಧ್ಯವನ್ನು ಉಟಕನೂರು ಮಠದ ಶ್ರೀ ಮರಿಬಸವಲಿಂಗ ದೇಶಿಕೇಂದ್ರ ಮಹಾಸ್ವಾಮಿ, ಅಡವಿ ಅಮರೇಶ್ವರ ಮಠದ ಶ್ರೀ ತೊಂಟಾದಾರ್ಯ ಮಹಾಸ್ವಾಮಿಗಳು ವಹಿಸಿದರು.
ಪ್ರೊ.ಶ್ರೀಪತಿ ಐ.ಐ.ಟಿ. ಹಾಗೂ ಆರ್ಥಿಕ ಸಲಹೆಗಾರರಾದ ಪ್ರೊ.ಕುಮಾರಸ್ವಾಮಿ ನದಿಯ ಉಳಿವಿನ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸಂಸದರಾದ ಬಿ.ವಿ.ನಾಯಕ, ಮಾಜಿ ಶಾಸಕರಾದ ಬಸವನಗೌಡ ಬ್ಯಾಗವಾಟ, ರಾಜಾ ವೆಂಕಟಪ್ಪ ನಾಯಕ,ಗಂಗಾಧರನಾಯಕ, ಕೃಷಿ ಬೆಲೆ ಅಯೋಗದ ಮಾಜಿ ಅಧ್ಯಕ್ಷರಾದ ಹನುಮನಗೌಡ ಬೆಳಗುರ್ಕಿ, ಜಿಲ್ಲಾ ಸಂಚಾಲಕರಾದ ಎನ್. ಉದಯಕುಮಾರ ಸಾಹುಕಾರ,ತಾ.ಸಂಚಾಲಕರಾದ ಶ್ರೀಧರ ಸ್ವಾಮಿ, ಅನಿತಾನವಲಕಲ್,ಡಾ.ಬಸವರಾಜಪ್ಪ ಪೋತ್ನಾಳ್, ಶರಣಪ್ಪಗೌಡ ನಕ್ಕುಂದಿ, ಶಿವಕುಮಾರ ಮಾಲಿಪಾಟೀಲ್, ಸುಜಾತ,ಜಗದೀಶ ಓತ್ತೂರ್, ಸೇರಿದಂತೆ ಪೋತ್ನಾಳ್ ಗ್ರಾಮದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಗ್ರಾಮಸ್ಥಾರು,ವಿವಿಧ ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಿದರು.
ಪೋತ್ನಾಳ್ ಗ್ರಾಮದಿಂದ ಹಿರೇಕೊಟ್ನಕಲ್ ವರೆಗೆ ನಡೆದ ನಿರ್ಮಾ ತುಂಗಭದ್ರ ಅಭಿಯಾನ ಜಲಜಾಗೃತಿ-ಜನಜಾಗೃತಿ ಪಾದಯಾತ್ರೆಯಲ್ಲಿ ನೂರಾರು ಜನರು ಭಾಗವಹಿಸಿದರು.
ಮಾನ್ವಿ: ತಾಲೂಕಿನ ಪೋತ್ನಾಳ್ ಗ್ರಾಮದಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನ ಜಾಗೃತಿ ಕಾರ್ಯಕ್ರಮವನ್ನು 3 ನೇ ಹಂತದ ಸಂಚಾಲಕರಾದ ಮಹಿಮಾ ಪಾಟೀಲ್ ಉದ್ಘಾಟಿಸಿದರು.
ಮಾನ್ವಿ: ತಾಲೂಕಿನ ಪೋತ್ನಾಳ್ ಗ್ರಾಮದಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನ ಜಾಗೃತಿ ಪಾದಯಾತ್ರೆ ನಡೆಯಿತು.

Leave a Reply

Your email address will not be published. Required fields are marked *