ಹಟ್ಟಿ ಚಿನ್ನದ ಗಣಿ, ರಾಯಚೂರು ಜಿಲ್ಲೆ:
ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಗೌರವಾನ್ವಿತ ಡಾ. ನಾಗಲಕ್ಷ್ಮಿ ಚೌಧರಿ ರವರು ಹಟ್ಟಿ ಚಿನ್ನದ ಗಣಿಯ ಮಹಿಳಾ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಲು ಗಣಿಯ ಅಧಿಕಾರಿಗಳ ಕ್ಲಬ್‌ನಲ್ಲಿ ಸಂವಾದ ಕಾರ್ಯಕ್ರಮವನ್ನು ನಡೆಸಿದರು.
ಕಾರ್ಯಕ್ರಮದ ಸಂದರ್ಭದಲ್ಲಿ ಜ್ಯೋತಿ ಮಹಿಳಾ ಒಕ್ಕೂಟದ ಸದಸ್ಯರು ಗಣಿಯಲ್ಲಿ ಕೆಲಸ ಮಾಡುತ್ತಿರುವ 4000 ಕಾರ್ಮಿಕರು ಹಾಗೂ ಹಟ್ಟಿಯ ಸಾಮಾನ್ಯ ನಾಗರಿಕರು ಎದುರಿಸುತ್ತಿರುವ ತೀವ್ರ ಆರೋಗ್ಯ ಸಮಸ್ಯೆಗಳ ಕುರಿತು ಆಯೋಗದ ಅಧ್ಯಕ್ಷೆಗೆ ಅಧಿಕೃತವಾಗಿ ಮನವಿ ಸಲ್ಲಿಸಿದರು.
ಮುಖ್ಯ ಅಂಶಗಳು / ಕಾರ್ಮಿಕರ ಆರೋಗ್ಯ ಸಮಸ್ಯೆಗಳು:
ಗಣಿಯು ನೂರಾರು ಕೋಟಿ ಲಾಭ ಗಳಿಸುತ್ತಿದ್ದರೂ, ತನ್ನ ಕಾರ್ಮಿಕರಿಗೆ ಅಗತ್ಯವಾದ ಮೂಲಭೂತ ವೈದ್ಯಕೀಯ ಸೌಲಭ್ಯಗಳ ಕೊರತೆ ಇದೆ.
ಗಣಿಯ ಆಸ್ಪತ್ರೆಯಲ್ಲಿ
ಸ್ತ್ರೀರೋಗ ತಜ್ಞರು
ಹೆರಿಗೆ ತಜ್ಞರು
ಗರ್ಭಿಣಿ ಮಹಿಳೆಯರಿಗಾಗಿ ಸ್ಕ್ಯಾನಿಂಗ್ ಕೇಂದ್ರ
ಇಲ್ಲದೇ ಇರುವುದರಿಂದ ಮಹಿಳಾ ಕಾರ್ಮಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
4000 ಕಾರ್ಮಿಕರಿಗೆ ಕೇವಲ ಒಬ್ಬನೇ ಎಂ.ಡಿ ವೈದ್ಯರು ಇದ್ದಾರೆ.
ಜನರಲ್ ಮೆಡಿಸಿನ್
ಹೃದಯ ತಜ್ಞ
ಅನಸ್ತೀಷಿಯಾ
ಬಿಪಿ/ಶುಗರ್ ತಜ್ಞರು
ಆರ್ಥೋಪೆಡಿಕ್ ತಜ್ಞರು
ಸೇರಿದಂತೆ ಯಾವುದೇ ವಿಶೇಷ ವೈದ್ಯರು ಇಲ್ಲದಿರುವುದು ಗಂಭೀರ ಸಮಸ್ಯೆಯಾಗಿದೆ.
ಭೂಗರ್ಭದಲ್ಲಿ ಅಪಘಾತ ಸಂಭವಿಸಿದಾಗ ತಕ್ಷಣ ಸ್ಪಂದಿಸಲು ಅಗತ್ಯವಾದ ಐಸಿಯು ಯುನಿಟ್‌ ಆಸ್ಪತ್ರೆಯಲ್ಲಿ ಇಲ್ಲ.
ಗಂಭೀರ ಅಪಘಾತದ ಸಂದರ್ಭಗಳಲ್ಲಿ ರೋಗಿಗಳನ್ನು ಬಾಗಲಕೋಟೆ, ರಾಯಚೂರು, ಬೆಳಗಾವಿ, ಬೆಂಗಳೂರು ಮುಂತಾದ ದೂರದ ಆಸ್ಪತ್ರೆಗೆ ಕರೆದೊಯ್ಯಬೇಕಾಗುತ್ತದೆ.
ಇದರಿಂದ ಕಾರ್ಮಿಕರು ಅಂಬುಲೆನ್ಸ್‌ನಲ್ಲಿ ನೋವಿನಿಂದ ತೊಳಲುತ್ತಾ ದೂರ ಪ್ರಯಾಣಿಸಬೇಕಾಗುತ್ತಿದ್ದು, ಮಧ್ಯ ದಾರಿಯಲ್ಲೇ ಪ್ರಾಣ ಕಳೆದುಕೊಂಡ ಘಟನೆಗಳೂ ಸಂಭವಿಸಿದ್ದವು ಎಂದು ಮನವಿಯಲ್ಲಿ ಉಲ್ಲೇಖಿಸಲಾಯಿತು.
ಒಕ್ಕೂಟದ ಬೇಡಿಕೆಗಳು:
1. ಹಟ್ಟಿ ಚಿನ್ನದ ಗಣಿ ಆಸ್ಪತ್ರೆಯಲ್ಲಿ ತಕ್ಷಣವೇ
ತಜ್ಞ ವೈದ್ಯರ ನೇಮಕ
ಐಸಿಯು ಘಟಕ ಸ್ಥಾಪನೆ
ಸ್ಕ್ಯಾನಿಂಗ್ ಕೇಂದ್ರ
ಮಹಿಳಾ ಮತ್ತು ಶಿಶುರೋಗ ತಜ್ಞರ ನೇಮಕ
ಸೇರಿದಂತೆ ಅಗತ್ಯವಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕು.
2. ಹಟ್ಟಿ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ಆರೋಗ್ಯಾಧಿಕಾರಿಯನ್ನು ನೇಮಕ ಮಾಡಬೇಕು.
ಮನವಿ ಸಲ್ಲಿಸಿದವರು:
ಜ್ಯೋತಿ ಮಹಿಳಾ ಒಕ್ಕೂಟದ ಸದಸ್ಯರು —
ಅಂಬಿಕಾ, ನಿರ್ಮಲಾ, ಚಂದ್ರಲೇಖಾ, ಸುಮಂಗಲಾ, ಪರಿಮಳ, ಜ್ಯೋತಿ ಸುಶೀಲಮ್ಮ, ಮೇರಿ ಪುಷ್ಪ,
ಸಾಮಾಜಿಕ ಕಾರ್ಯಕರ್ತರು — ಸುರೇಶ್ ಗೌಡ ಗುರಿಕಾರ, ಲಾಲ್ ಪೀರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *