ದೇಹದ ಪ್ರತಿಯೊಂದು ಆವಯವಗಳಿಗೆ ಹಾನಿ ಮಾಡುವ ತಂಬಾಕು ಹಾಗೂ ಅದರ ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್ನಂತಹ ಮಾರಕ ರೋಗಗಳಿಗೆ ತುತ್ತಾಗಿ ಕುಟುಂಬವನ್ನೆ ಸರ್ವನಾಶ ಮಾಡುವ 4000 ಸಾವಿರ ರಾಸಾಯನಿಕಗಳನ್ನು ಹೊಂದಿರುವ ತಂಬಾಕು ಹಾಗೂ ಅದರ ಉತ್ಪನ್ನಗಳನ್ನು ಬಳಸದೆ ಕಾಲೇಜು ವಿಧ್ಯಾರ್ಥಿಗಳು ತಮ್ಮ ಸಹಪಾಠಿಗಳಿಗೆ, ಆತ್ಮೀಯರಿಗೆ ತಿಳಿಸುವ ಮೂಲಕ ಸದೃಢ ಯುವ ಸಮುದಾಯವನ್ನು ರೂಪಿಸಲು ಇಂದಿನಿಂದಲೆ ಹೆಜ್ಜೆ ಇಡೋಣವೆಂದು ಸನ್ರೈಸ್ ಪದವಿ ಕಾಲೇಜಿನ ಪ್ರಾಂಶುಪಾಲ ಸುನೀಲ್ ಸ್ವಾಮಿ ತಿಳಿಸಿದರು ವಿಧ್ಯಾರ್ಥಿಗಳಿಗೆ ವಿನಂತಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಹೀರಾಬಾದ್ ನಗರ ಆರೋಗ್ಯ ಕೇಂದ್ರ, ಎನ್ಎಸ್ಎಸ್ ಘಟಕ ರವರ ಸಹಯೋಗದಲ್ಲಿ ರಾಯಚೂರು ಸನ್ರೈಸ್ ಪದವಿ ಕಾಲೇಜಿನಲ್ಲಿ ತಂಬಾಕು ಮುಕ್ತ ಯುವ ಅಭಿಯಾನ 3.O ಅಡಿಯಲ್ಲಿ ಹಮ್ಮಿಕೊಂಡ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಇತ್ತೀಚಿನ ದಿನಗಳಲ್ಲಿ ಗುಟ್ಕಾ, ಪಾನಮಸಾಲ ಸೇರಿದಂತೆ ವಿವಿಧ ತಂಬಾಕು ಉತ್ಪನ್ನಗಳು ಆಕರ್ಷಕ ಹೆಸರುಗಳಿಂದ ಯುವಜನತೆಯನ್ನು ತಮ್ಮಡೆಗೆ ಸೆಳೆಯುತ್ತಿವೆ. ಆದರೆ ಹವ್ಯಾಸವಾಗಿ ಆರಂಭವಾಗುವ ತಂಬಾಕು ಸೇವೆನೆಯು ಚಟವಾಗಿ ಬದಲಾಗಿ ಜೀವನವನ್ನೇ ನಾಶ ಮಾಡುವುದನ್ನು ನಾವು ಮರೆಯಬಾರದು ಎಂದು ತಿಳಿಸಿದರು.
ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ ಮಾತನಾಡಿ, ಆರೋಗ್ಯದ ಪರಿಣಾಮ ಮಾತ್ರವಲ್ಲದೆ ಕ್ಯಾನ್ಸರ್, ಹೃದಯ ರೋಗ, ಶ್ವಾಸಕೋಶದ ತೊಂದರೆಗಳು, ಹಲ್ಲಿನ ಸಮಸ್ಯೆಗಳು ಉಂಟಾಗುತ್ತವೆ. ಅಲ್ಲದೆ ದೂಮ್ರಪಾನಗಳಾದ ಬೀಡಿ, ಸಿಗರೇಟ್, ಹುಕ್ಕಾ ಮುಂತಾದವುಗಳನ್ನು ಬಳಸುವವರ ಹತ್ತಿರವಿರುವವರಿಗೂ, ಒಡನಾಡಿಗಳಿಗೆ, ಕುಟುಂಬದ ಸದಸ್ಯರಿಗೆ ಹಾಗೂ ಬೀಡಿ ಸಿಗರೇಟ್ ಸೇದುವುದಕ್ಕಾಗಿಯೇ ಕೆಲವು ಅಂಗಡಿಗಳನ್ನು ಗುರ್ತಿಸಿಕೊಳ್ಳುವ ಅಂಗಡಿಗಳ ಮಾಲೀಕರಿಗೂ ಸಹ ಪರೋಕ್ಷ ಧೂಮಪಾನದ ಮೂಲಕ ಹೆಚ್ಚು ಹಾನಿಯುಂಟಾಗುತ್ತದೆ. ಮತ್ತು ಅಕಾಲಿಕ ಸಾವುಗಳಿಗೆ ಕಾರಣವಾಗುತ್ತದೆ. ತಂಬಾಕಿನ ಬಳಕೆಯಿಂದಾಗಿ ಕ್ಯಾನ್ಸರ್ ಸೇರಿದಂತೆ ದೇಹದ ಬಹುತೇಕ ಎಲ್ಲಾ ಅಂಗಾಂಗಗಳ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದ್ದು, ಪುರುಷರಲ್ಲಿ ವಿಕೃತ ವಿರ್ಯಾಣು ಉತ್ಪಾದನೆ, ಮಹಿಳೆಯರಲ್ಲಿ ಬಂಜೆತನಕ್ಕೆ ಕಾರಣವಾಗುವ ಮೂಲಕ ಸಂತಾನಭಿವೃದ್ದಿಗೆ ಮಾರಕವಾಗುತ್ತವೆ. ಈ ದಿಶೆಯಲ್ಲಿ ಯುವಜನತೆ ಇಂದಿನಿಂದಲೆ ತಂಬಾಕು ಉತ್ಪನ್ನಗಳ ಬಳಕೆಯಿಂದ ದೂರವಾಗಲು ಮನವಿ ಮಾಡಿದರು.
ಪ್ರತಿಜ್ಞೆ: ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸರೋಜಾ ಕೆ, ರವರು ನಶೆ ಮುಕ್ತ ಭಾರತ ಅಡಿಯಲ್ಲಿ ಮಾದಕ, ಪದಾರ್ಥ, ತಂಬಾಕು ಬಳಕೆ ತ್ಯಜಿಸುವ ಕುರಿತು ಪ್ರತಿಜ್ಞೆ ಬೋಧಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಉಪನ್ಯಾಸಕರಾದ ಭೀಮೇಶ್, ಅಮರೇಶ, ಆಫ್ರೀನ್ ಬಾನು, ರಾಜಮಾತಾ, ಬಿಹೆಚ್ಇಓ ಸರೋಜಾ ಕೆ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಈರಮ್ಮ, ಪಿಹೆಚ್ಸಿಓ ಶಶಿಕಲಾ, ಹೆಚ್ಐಓ ಶೃತಿ, ಆಶಾ ಕಾರ್ಯಕರ್ತೆ ಸುಶೀಲಾ ಸೇರಿದಂತೆ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು

