ಸಿಂಧನೂರು:
ಮುಂದೆ ಶಿಕ್ಷಕರಾಗಬಯಸುವವರು, ಹಾಗೂ ಈಗಾಗಲೇ ಶಿಕ್ಷಕ ವೃತ್ತಿಯಲ್ಲಿರುವವರಿಗೆ ಸುಪ್ರೀಮ್ ಕೋರ್ಟ ಆದೇಶದಂತೆ ಶಿಕ್ಷಕರ ಅರ್ಹತಾ ಪರೀಕ್ಷೆ ಕಡ್ಡಾಯ ಇರುವುದರಿಂದ ಡಿಸೆಂಬರ್ ೭ ರಂದು ನಡೆಯುವ ಟಿಇಟಿ. ಪರೀಕ್ಷೆಯನ್ನು ಚೆನ್ನಾಗಿ ಬರೆಯಬೇಕೆನ್ನುವ ಸದುದ್ದೇಶದಿಂದ ಇಂದು ಕನಕದಾಸ ಬಿಇಡಿ. ಕಾಲೇಜಿನಲ್ಲಿ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಂಡಿರುವುದು ಉತ್ತಮ ಕಾರ್ಯ. ಪರೀಕ್ಷಾರ್ಥಿಗಳೆಲ್ಲರೂ ಉತ್ಸಾಹದಿಂದ ಸರಿಯಾಗಿ ಅಭ್ಯಾಸ ಮಾಡಿ ಮಾಡಿ ಟಿ.ಇ.ಟಿ. ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿ ಶಿಕ್ಷಕ ಹುದ್ದೆಯನ್ನು ಪಡೆಯಲು ಹೆಚ್ಚಿನ ಪ್ರಯತ್ನ ಮಾಡಬೇಕು ಆತ್ಮ ಸ್ಥೆöÊರ್ಯ ಬೆಳೆಸಿಕೊಳ್ಳಬೇಕೆಂದು ಹೇಳಿದರು. ಕನಕ ನೌಕರರ ಸಂಘದವರು ಹಮ್ಮಿಕೊಂಡಿರುವ ಕಾರ್ಯ ಶ್ಲಾಘನೀಯ ಎಂದು ಮಾಜಿ ಸಂಸದ ಹಾಗೂ ಕನಕದಾಸ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ ಹೇಳಿದರು.
ಅವರು ನಗರದ ಸುಕಾಲಪೇಟೆಯ ಕನಕದಾಸ ಬಿ.ಇಡಿ. ಕಾಲೇಜಿನಲ್ಲಿ ರಾಯಚೂರು ಜಿಲ್ಲಾ ಹಾಗೂ ಸಿಂಧನೂರು ತಾಲೂಕ ಕನಕ ನೌಕರರ ಸಂಘ ಮತ್ತು ಕನಕದಾಸ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶಿಕ್ಷಕರ ಅರ್ಹತಾ ಪರೀಕ್ಷೆಯ ಪೂರ್ವಭಾವಿ ಒಂದು ದಿನದ ಕಾರ್ಯಾಗಾರವನ್ನು ಸಸಿಗೆ ನೀರುಣಿಸುವದರ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಸಾನಿಧ್ಯ ವಹಿಸಿದ್ದ ತುರುವಿಹಾಲ ಶ್ರೀ ಅಮೋಘ ಸಿದ್ದೇಶ್ವರ ಮಠದ ಪೀಠಾಧಿಪತಿ ಶ್ರೀ ಮಾದಯ್ಯ ಗುರುವಿನ ಮಾತನಾಡಿ ಜೀವನದಲ್ಲಿ ಯಶಸ್ವಿಯಾಗಬೇಕಾದರೆ ಕಾರ್ಯಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಕಾಡಿನಲ್ಲಿ ಸಿಂಹ ರಾಜನಾದರೂ ತನ್ನ ಆಹಾರವನ್ನು ಬೇಟೆಯಾಡಿ ಪಡೆದುಕೊಳ್ಳುವಂತೆ ಶಿಕ್ಷಕರಾಗಬಯಸುವವರು ಹೆಚ್ಚಿನ ಅಧ್ಯಯನಶೀಲತೆ, ಪ್ರಯತ್ನ ಅವಶ್ಯಕವೆಂದು ಹೇಳಿ ದೊರೆಯುವಂತಹ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿ ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದರು.
ಜಿಲ್ಲಾ ಕನಕ ನೌಕರ ಸಂಘದ ಅಧ್ಯಕ್ಷ ನಾಗರಾಜ ಅರಳಿಮರದ ಅಧ್ಯಕ್ಷತೆಯನ್ನು ವಹಿಸಿದ್ದರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಜಾಲಿಬೆಂಚಿ, ತಾಲೂಕ ಕನಕ ನೌಕರರ ಸಂಘದ ಅಧ್ಯಕ್ಷ ಗ್ಯಾನಪ್ಪ ಕನ್ನಾಪೇಟೆ, ಮಸ್ಕಿ ತಾಲೂಕ ಕನಕ ನೌಕರರ ಸಂಘದ ಅಧ್ಯಕ್ಷ, ವೀರೇಶ ನಾರಬಂಡಿ ಸರಕಾರಿ ನೌಕರರ ಸಂಘದ ಮಾಜಿ ತಾಲೂಕ ಅಧ್ಯಕ್ಷ ಬಸವರಾಜ ವಿ., ಸಾಹಿತಿ ಬೀರಪ್ಪ ಶಂಭೋಜಿ, ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾದ ಉಪನ್ಯಾಸಕ ಶರಣಪ್ಪ ಹೊಸಳ್ಳಿ, ಮುದುಕಪ್ಪ ತುರುವಿಹಾಳ, ಯಮನೂರಪ್ಪ ವಠಾರ, ಬಸವರಾಜ ಆನೆಗುಂದಿ, ಮಲ್ಲಪ್ಪ ಬಸಾಪುರ, ಬೀರಪ್ಪ ಹಂಚಿನಾಳ, ಹನುಮಂತಪ್ಪ ಹಗೆದಾಳ, ವೀರೇಶ ನಾರಬಂಡಿ ಮಸ್ಕಿ ತಾಲೂಕ ಅಧ್ಯಕ್ಷ, ಬೀರೇಂದ್ರ ಮೇಟಿ, ಶಂಕರ ಗುರಿಕಾರ, ಮಲ್ಲಿಕಾರ್ಜುನ ಕುರಕುಂದಿ, ದೈಹಿಕ ಶಿಕ್ಷಣ ಶಿಕ್ಷಕ ಆಂಜನೇಯ, ಹುಚ್ಚಪ್ಪ ನೇಗಲಿ, ಉಪಸ್ಥಿತರಿದ್ದರು. ೧೫೦ ಅಭ್ಯರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

