ಮಾನ್ವಿ : ಪಟ್ಟಣದಲ್ಲಿ ಬಿರುಸಿನ ಮತದಾರರ ಸಮಗ್ರ ಪರಿಷ್ಕರಣೆಯ ಪ್ರಕ್ರಿಯೆಯನ್ನು ತಹಶೀಲ್ದಾರ್ ಭೀಮರಾಯ ಬಿ.ರಾಮಸಮುದ್ರ ಪರಿಶೀಲಿಸಿ ಮಾತನಾಡಿ ಭಾರತ ಚುನಾವಣೆಯ ಆಯೋಗದ ಆದೇಶ ಹಿನ್ನೆಲೆಯಲ್ಲಿ ಪ್ರತಿಯೋಬ್ಬರು ಕೂಡ ತಮ್ಮ ದಾಖಲಾತಿಗಳನ್ನು ಬಿ.ಎಲ್.ಒ.ಗಳಿಗೆ ನೀಡಿ ಎಸ್.ಐ.ಆರ್-2026 ರ ಪ್ರಕ್ರಿಯೆಯಲ್ಲಿ ದಾಖಲಾತಿ ಮಾಡಿಕೊಳ್ಳಬೇಕು ಎಸ್.ಐ.ಆರ್-2026ರ ಪ್ರಕ್ರಿಯೆಯಿಂದ ದೂರ ಉಳಿದಲ್ಲಿ ಮತದಾನ ಹಕ್ಕಿನಿಂದ ವಂಚಿತರಾಗುತ್ತಾರೆ. ಮತದಾರರ ಪಟ್ಟಿಯಿಂದ ಹೋರಗಡೆ ಇದ್ದರೆ ಸರಕಾರದ ಸವಲತ್ತುಗಳಿಂದ ದೂರ ಉಳಿದಂತೆಯಾಗುತ್ತದೆ. ಪಟ್ಟಣದ ಶಾಲೆ,ಅಂಗನವಾಡಿ ಕೇಂದ್ರ, ಪುರಸಭೆ, ತಹಸಿಲ್ದಾರರ ಕಚೇರಿಗೆ ಭೇಟಿ ನೀಡಿ. ಎಸ್.ಐ.ಆರ್-2026 ರ ಪ್ರಕ್ರಿಯೆಯ ಅಗತ್ಯಮಾಹಿತಿಯನ್ನು ಬಿ.ಎಲ್.ಒ.ಗಳಿಂದ ಪಡೆಯಬಹುದಾಗಿದೆ ಮತದಾರರ ಸಮಗ್ರ ಪರಿಷ್ಕರಣೆಯ ಯಶಸ್ವಿಗೆ ಪ್ರತಿಯೊಬ್ಬರು ಸಹಕರಿಸುವ ಮೂಲಕ .ಸದೃಢ ಭಾರತ ನಿರ್ಮಾಣ ಕ್ಕೆ ಕೈ ಜೋಡಿಸುವಂತೆ ಕೋರಿದರು.

