ಮಸ್ಕಿ : ಮಹಾತ್ಮ ಗಾಂಧಿ ಬದುಕೇ ಒಂದು ಸಂದೇಶವಾಗಿದೆ,ಜೀವನದಲ್ಲಿ ಪ್ರತಿ ಮನುಷ್ಯನು ತಪ್ಪು ಮಾಡುತ್ತಾನೆ ಅದು ಆಯಾ ಕಾಲಮಾನಕ್ಕೆ ಸಂಬಂಧಿಸಿದ ವಿಚಾರವಾಗಿದ್ದು,ಗತಕಾಲವನ್ನು ವರ್ತಮಾನದಲ್ಲಿ ಕುಳಿತು ವಿಶ್ಲೇಷಿಸಬಾರದು ಘಟನೆಗಿಂತ ಭವಿಷ್ಯ ರೂಪಿಸುವುದು ಮುಖ್ಯವಾಗುತ್ತದೆ ಹಾಗೂ ಎಂದು
ಡಾ.ಬಸವರಾಜ ಕೋಡಗುಂಟಿ ಯವರು ಹೇಳಿದರು. ನಂತರ ಕಾರ್ಯಕ್ರಮದ ಕುರಿತು ಕಾಲೇಜಿನ ಪ್ರಾಂಶುಪಾಲರಾದ ಡಾ.ಮಹಾಂತಗೌಡ ಪಾಟೀಲ್,ಡಾ.ಶಿವಶರಣಪ್ಪ ಇತ್ಲಿ ರವರು ಮಾತನಾಡಿದರು.
ಈ ವೇಳೆ ಡಾ.ರಾಮಣ್ಣ ಜುಮ್ಮ,ಶಿವಗ್ಯಾನಪ್ಪ,ಸಣ್ಣಪ್ಪ ನಾಯಕ,ಹಾಜಿ ಬಾಬಾ,ಡಾ.ರಜಿಯಾ,ಐಕ್ಯೂಎಸಿ ಸಂಯೋಜಕರಾದ ರೋಹಿಣಿ ಮೂರ್ತಿ,ಕನ್ಯಾಕುಮಾರಿ,ಡಾ.ಬಸವರಾಜ ತಡಕಲ್ಲ,ಯಾಳಗಿ ಶ್ರೀನಿವಾಸ್,ಇಮಾಮ್ ಸಾಬ್ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ.ವಿರುಪನಗೌಡ ಸೇರಿದಂತೆ ವಿವಿಧ ಕಾಲೇಜುಗಳ ಸಂಶೋಧನಾ ವಿದ್ಯಾರ್ಥಿಗಳು,ಪ್ರಾಧ್ಯಾಪಕರು, ಹಾಗೂ ವಿದ್ಯಾರ್ಥಿ ,ವಿದ್ಯಾರ್ಥಿನಿಯರು ಇದ್ದರು.

