ತಾಳಿಕೋಟೆ: ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಅಸ್ಕಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ದಿವಂಗತ ಬಿ ಎಸ್ ಪಾಟೀಲ (ಸಾಸನೂರ) ಫೌಂಡೇಶನ್ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಉಚಿತ ಆರೋಗ್ಯ ಶಿಬಿರ ಕಾರ್ಯಕ್ರಮದಲ್ಲಿ ತಾಳಿಕೋಟಿ ಪಿಎಸ್ಐ ಜ್ಯೋತಿ ಖೋತ್ ಅವರನ್ನು ಅಸ್ಕಿ ಪರಿವಾರದಿಂದ ಸನ್ಮಾನಿಸಿ ಗೌರವಿಸಲಾಯಿತು. ಪೂಜ್ಯ ಸಿದ್ದಲಿಂಗ ದೇವರು ಸಾನಿಧ್ಯ ವಹಿಸಿದ್ದರು. ಶ್ರೀ ಶ್ರೀನಾಥಯ್ಯ ಹಿರೇಮಠ ನೇತೃತ್ವ ವಹಿಸಿದ್ದರು. ಗಣ್ಯರಾದ ಬಸನಗೌಡ ಹಡಲಗೇರಿ, ಡಾ.ಬಸವರಾಜ ಅಸ್ಕಿ, ಪ್ರಭುಗೌಡ ದೇಸಾಯಿ, ನಿರ್ದೇಶಕ ವಿಜಯ್ ಅಸ್ಕಿ, ಪ್ರಭುಗೌಡ ಮದರ್ಕಲ್, ಎಚ್ಎಸ್ ಪಾಟೀಲ,ಅರವಿಂದ ಹೂಗಾರ,ಸಿ.ಬಿ.ಅಸ್ಕಿ,ಶಂಕರಗೌಡ ಹಿಪ್ಪರಗಿ,ಸಿ.ಸಿ.ಪಾಟೀಲ,ಡಾ. ಶ್ರೀಶೈಲ ಹುಕ್ಕೇರಿ,ಡಾ.ಪ್ರೀತಿ ವಿಜಯ, ಡಾ.ಅನೂಪ, ಶಂಕರಗೌಡ ಅಸ್ಕಿ,ಡಾ.ನಿಂಗರಾಜ, ಬಿ.ಎನ್.ಹಿಪ್ಪರಗಿ,ಎಸ್.ಎಂ.ಸಜ್ಜನ, ಜಿ.ಜಿ.ಅಸ್ಕಿ, ನಿಂಗನಗೌಡ ಪಾಟೀಲ, ಮಹೇಶ ಜೋಶಿ ಡಿ.ಕೆ.ಪಾಟೀಲ, ಮಲ್ಲು ಅಸ್ಕಿ ಬಿ.ವೈ.ಬಂಟನೂರ ಹಾಗೂ ಅಸ್ಕಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರು, ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಇದ್ದರು.

