ತಾಳಿಕೋಟಿ: ಪಟ್ಟಣದ ಸಾರಿಗೆ ನಿಗಮದ ಸಿಬ್ಬಂದಿ ವಸತಿ ಗೃಹಗಳ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ,ಶಾಸಕರಾದ ಸಿ.ಎಸ್. ನಾಡಗೌಡ(ಅಪ್ಪಾಜಿ) ಅವರನ್ನು ನಿಗಮದ ವತಿಯಿಂದ ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಸನ್ಮಾನಿಸಿ ಗೌರವಿಸಿದರು. ವೇ.ಮೂ.ಮುರಗೇಶ ವಿರಕ್ತಮಠ,ವೀರಪಾಕ್ಷಯ್ಯ ಸಿ.ಹಿರೇಮಠ,ತಹಸಿಲ್ದಾರ್ ಡಾ.ವಿನಯಾ ಹೂಗಾರ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕ ಅಧ್ಯಕ್ಷ ಸಂಗನಗೌಡ ದೇಸಾಯಿ, ಸುರೇಶಧಣಿ ನಾಡಗೌಡ ಬಿಂಜಲಭಾವಿ, ಸಿದ್ದನಗೌಡ ಪಾಟೀಲ (ನಾವದಗಿ), ಪ್ರಭುಗೌಡ ಮದರಕಲ್ಲ, ಶರಣುಧಣಿ ದೇಶಮುಖ, ಸಂಗನಗೌಡ ಅಸ್ಕಿ,ಘಟಕ ವ್ಯವಸ್ಥಾಪಕ ಪಿ.ಕೆ.ಜಾಧವ, ಪಿಎಸ್ಐ ಜ್ಯೋತಿ ಖೋತ್,ನಿಗಮದ ಬೋರಯ್ಯ ಮಹಿಸಾಲ, ಗುತ್ತಿಗೆದಾರ ಅಮ್ಮಾನ್ ಮುನ್ಸಿ ಹಾಗೂ ನಿಗಮದ ಸಿಬ್ಬಂದಿಗಳು ಇದ್ದರು.

