ಆಳಂದ; ತಾಲ್ಲೂಕಿನ ಭೀಮಪುರ ಗ್ರಾಮದಲ್ಲಿ ಸಾಂಘ್ವಿ ಮೂವರ್ಸ್ ಫ್ಯೂಚರ್ ರಿನ್ಯೂವಬಲ್ಸ್ ಹಾಗೂ ಜೀವನ ಪ್ರಕಾಶ್ ಚಾರಿಟೇಬಲ್ ಸೊಸೈಟಿ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಶಿಬಿರದಲ್ಲಿ ಹೃದಯ ಸಂಬಂಧಿ ಕಾಯಿಲೆಗಳ, ರಕ್ತದೊತ್ತಡ, ಜ್ವರ, ಶೀತ, ಕೆಮ್ಮು ಸೇರಿದಂತೆ ಇಎನ್ ಟಿ ತಪಾಸಣೆ ನಡೆಸಿದರು.ಅಗತ್ಯವಿರುವವರಿಗೆ ಉಚಿತವಾಗಿ ಔಷಧಿಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಸಿ,ಎಚ್,ಒ, ಅನಿಲ್,ಶೇರಿಕರ್, ಪೀರ್ ಸಾಬ್ ,ಗ್ರಾಪಂ ಸದಸ್ಯರಾದ ಫಕ್ರುದ್ದೀನ್, ಹಾಗೂ ಆಶಾ ಕಾರ್ಯಕರ್ತೆ ಮಲ್ಲಮ್ಮ, ಹಾಗೂ ಜೀವನ್ ಪ್ರಕಾಶ್ ಚಾರಿಟೇಬಲ್ ಸೊಸೈಟಿ ಸಂಯೋಜಕರಾದ ಪವನ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ನೂರು ಕ್ಕಿಂತ ಹೆಚ್ಚು ಜನರು ಶಿಬಿರ ಪ್ರಯೋಜನ ಪಡೆದರು.

