ಶರಣಬಸವೇಶ್ವರ 204ನೇ ಜಾತ್ರಾ ಮಹೋತ್ಸವದ ಅಂಗವಾಗಿ ಕಲಬುರಗಿಯ ವಿವಿಧೆಡೆ ವಿವಿಧ ಸಂಘ-ಸಂಸ್ಥೆಗಳು-ವ್ಯಾಪಾರಿಗಳು, ರಾಜಕೀಯ ಮುಖಂಡರು ಅನ್ನದಾಸೋಹ ಮಾಡಿ ತರಹೇವಾರಿ ಭಕ್ಷ್ಯಗಳನ್ನು ಉಣಬಡಿಸಿದರು.
ನೀರು, ಮಜ್ಜಿಗೆ, ಶರಬತ್, ಕಲ್ಲಂಗಡಿ, ಬಾಳೆ, ದ್ರಾಕ್ಷಿ, ಖರ್ಜೂರ, ಕಬ್ಬಿನ ಹಾಲು ಇತ್ಯಾದಿಗಳ ‘ದಾಸೋಹ’ವು ನೆತ್ತಿ ಸುಡುವ ಬಿಸಿನಲ್ಲಿ ಭಕ್ತರ ಮನ-ಹೊಟ್ಟೆ ಎರಡನ್ನೂ ತಣಿಸಿದವು.ಸರ್ದಾರ್‌ ಪಟೇಲ್‌ ವೃತ್ತದಿಂದ ಹಿಡಿದು ದೇವಸ್ಥಾನದ ತನಕ, ಅಪ್ಪ ಕೆರೆಯ ವಿಜ್ಞಾನ ಕೇಂದ್ರದಿಂದ ಗೋವಾ ಹೋಟೆಲ್‌ ತನಕ, ಲಾಲಗೇರಿ ಕ್ರಾಸ್‌ನಿಂದ ದೇವಸ್ಥಾನದ ತನಕ ಅಕ್ಷರಶಃ ಭಕ್ತರನ್ನು ಕರೆ-ಕರೆದು ‘ದಾಸೋಹ’ ಸೇವೆಗೈದರು. ಎಸ್‌ಬಿ ಟೆಂಪಲ್‌ ರಸ್ತೆಯ ಮೋದಿ ಹಾಸ್ಪಿಟಲ್‌ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.

ಜಿಲ್ಲೆ ಅಷ್ಟೇ ಅಲ್ಲದೆ ಪಕ್ಕದ ಜಿಲ್ಲೆಗಳಿಂದಲೂ ಭಕ್ತರು ಪಾದಯಾತ್ರೆ ಮೂಲಕ ದೇಗುಲಕ್ಕೆ ಆಗಮಿಸಿದರು. ಬೆಲ್ಲ, ಅಕ್ಕಿ ಸೇರಿದಂತೆ ಧಾನ್ಯಗಳನ್ನು ದಾಸೋಹಕ್ಕಾಗಿ ಅರ್ಪಿಸಿದರು.

Leave a Reply

Your email address will not be published. Required fields are marked *