ಲಿಂಗಸಗೂರು : ಮಾ 5 –

ಶ್ರೀ ಅಮರೇಶ್ವರ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿ ತ್ತು. ಮೂಡಣ ದಿಕ್ಕಿನಲ್ಲಿ ಹೋಳಿ ಹುಣ್ಣಿಮೆಯ ಪೂರ್ಣಚಂದಿರ ಮೋಡ ಸರಿಸಿ ಹೊರಬರುತ್ತಿದ್ದಂತೆ, ಅತ್ತ ಪಡುವಣದಲ್ಲಿ ಬಾನ ಮರೆಗೆ ಭಾಸ್ಕರ ಸರಿಯುತ್ತಿರುವ ಸಂದರ್ಭ. ಲಕ್ಷಾಂತರ ಭಕ್ತ ಸಾಗರ ಭಕ್ತಿ-ಭಾವದಿಂದ ಶ್ರೀ ಅಮರೇಶ್ವರನ ತೇರು ಎಳೆಯುವ ಮೂಲಕ ಮಹಾರಥೋತ್ಸವದ ಸಂಭ್ರಮ ಇಮ್ಮಡಿ ಗೊಂಡಿತ್ತು.

ಸಂಪ್ರದಾಯದಂತೆ ಗುರುಗುಂಟಾ ಸಂಸ್ಥಾನಿಕ ರಾಜಾ ಸೋಮನಾಥ ನಾಯಕರುರಥದ ಬಳಿ ಬಂದುರಥಕ್ಕೆ ಪೂಜೆ ಸಲ್ಲಿಸಿ, ಚಕ್ರಗಳಿಗೆ ಕಾಯಿ ಕರ್ಪುರ ಅರ್ಪಿಸಿದ ನಂತರ ಅಮರೇಶ್ವರ ಗುರು ಅಭಿನವ ಗಜದಂಡ ಶಿವಾಚಾರ್ಯರು ರಥಾರೂಢರಾಗುತ್ತಾರೆ.
ನಂತರ ಭಕ್ತರು ಸಂಸ್ಥಾನಿಕರಿಗೆ ರಥೋತ್ಸವದ ಸಂಭ್ರಮ ಕಣ್ಣುಂಬಿಕೊಳ್ಳಲು ರಾಜ ನಿವಾಸಕ್ಕೆ ಬೀಳ್ಕೊಟ್ಟ ನಂತರ ರಥೋತ್ಸವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಆವರಣದಲ್ಲಿರುವ ದೇವಸ್ಥಾನದ ರಥಬೀದಿಯಲ್ಲಿ ಸಂಜೆ ಸಾವಿರಾರು ಭಕ್ತರು ಬಸವೇಶ್ವರ ದೇವಸ್ಥಾನ (ಪಾದುಗಟ್ಟೆ)ವರೆಗೆ ರಥವನ್ನು ಎಳೆದು ಕೃತಾರ್ಥರಾದರು. ಗುಂತಗೋಳ
ಸಂಸ್ಥಾನಿಕರಾದ ರಾಜಾ ಅಮರೇಶ್ವರ ನಾಯಕ, ರಾಜಾ ಶ್ರೀನಿವಾಸ ನಾಯಕ, ಶಾಸಕ ಮಾನಪ್ಪ ವಜ್ಜಲ್, ವಿಧಾನ ಪರಿಷತ್‌ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪೂರ, ಮಾಜಿ ಸಚಿವ ಅಮರೇಗೌಡ ಪಾಟೀಲ್‌ ಬಯ್ಯಾಪೂರ, ಸಹಾಯಕ ಆಯುಕ್ತ ಬಸವಣ್ಣೆಪ್ಪ ಕಲಶೆಟ್ಟಿ, ಡಿವೈಎಸ್‌ಪಿ ದತ್ತಾತ್ರೇಯ ಕಾರ್ನಾಡ್, ಪಿಐ ಹೊಸಕೇರಪ್ಪ ಸೇರಿ ನಾನಾ ಪಕ್ಷಗಳ ಮುಖಂಡರು, ರೈತ ಮುಖಂಡರುಗಳು, ಪ್ರಗತಿಪರ ಸಂಘಟನೆ ಪದಾಧಿಕಾರಿಗಳು ಸೇರಿ ಸುತ್ತಮುತ್ತಲಿನ ತಾಲೂಕು, ಜಿಲ್ಲೆ ಹಾಗೂ ಹೊರರಾಜ್ಯಗಳಿಂದ ಬಂದ ಸದಸ್ರಾರು ಭಕ್ತ ಸಮೂಹ ಮಹಾರಥೋತ್ಸವವನ್ನು ಸಾಕ್ಷೀಕರಿಸಿದರು .

Leave a Reply

Your email address will not be published. Required fields are marked *