ಮಾನವಿ, ಜ 30: ಉತ್ತರ ಕರ್ನಾಟಕದ ನಡೆದಾಡುವ ದೇವರು ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಇಂದು ಮಾನವಿಯ ಅಖಿಲ ಭಾರತ ವೀರಶೈವ ಲಿಂಗಾಯತ ಸೌಹಾರ್ದ ಸಹಕಾರಿ ಸಂಘಕ್ಕೆ ಭೇಟಿ ನೀಡಿ ಆಶೀರ್ವಾದ ನೀಡಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಸೌಹಾರ್ದ ಸಹಕಾರಿ ಸಂಘ ನಿಯಮಿತ ಮಾನ್ವಿ ರಿಕ್ರೀಯೇಶನ್ ಕ್ಲಬ್ ಹಿಂದುಗಡೆ ಮಹಾಲಕ್ಷ್ಮಿ ಸೂಪರ್ ಮಾರ್ಕೆಟ್ ಪಕ್ಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಭಕ್ತರಿಗೆ ಆಶೀರ್ವಾದ ನೀಡಿದರು.
ಈ ಸಂಧರ್ಭದಲ್ಲಿ ಅರುಣ್ ಕುಮಾರ್ ಚಂದಾ, ಅಧ್ಯಕ್ಷರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕ ಮಾನ್ವಿ, ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಸೌಹಾರ್ದ ಸಹಕಾರಿ ಸಂಘ ನಿಯಮಿತ ಮಾನ್ವಿ, ಹಾಗೂ ಬ್ಯಾಂಕಿನ ಸಿಬ್ಬಂದಿಗಳು ಮತ್ತು ಹಲವಾರು ಭಕ್ತರು ಆಶೀರ್ವಾದ ಪಡೆಯಲು ಬಂದಿದ್ದರು.
ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಭಕ್ತರಿಗೆ ಆಶೀರ್ವಾದ ನೀಡಿ, ಅವರ ಆತ್ಮಶಕ್ತಿ ಮತ್ತು ಧೈರ್ಯವನ್ನು ಹೆಚ್ಚಿಸಲು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಸಹಕಾರಿಯ ಅಧ್ಯಕ್ಷ ಅರುಣಚಂದಾ, ಉಪಾಧ್ಯಕ್ಷ ಡಾ ರವಿಕುಮಾರ್ ಪಾಟೀಲ ಗೋರ್ಕಲ್, ಸಹಕಾರಿಯ ಸದಸ್ಯರಾದ ಸಂತೋಷ ಕುಮಾರ, ದೊಡ್ಡಪ್ಪ ಗೌಡ ಜೀನೂರು, ಶರಣಗೌಡ ಗೋರ್ಕಲ್, ಚಂದ್ರಶೇಖರ ಮದ್ಲಾಪೂರು, ವೀರೇಶ ನಾಯಕ ಬೆಟ್ಟದೂರು, ಶಿವ

