ಮಾನ್ವಿ: ಪಟ್ಟಣದ ಪತ್ರಿಕಾ ಭವನದಲ್ಲಿ ಕರ್ನಾಟಕ ರಾಜ್ಯ ಅಲೆಮಾರಿ ಪ.ಜಾ. ಚನ್ನದಾಸರ್, ಹೊಲೆಯಾದಾಸರ್, ಮಾಲದಾಸರಿ ಕ್ಷೇಮಾಭಿವೃದ್ದಿ ಸಂಘ ಬೆಂಗಳೂರು ರಾಜ್ಯ ಕಾರ್ಯದರ್ಶಿ ಮಹಾದೇವಪ್ಪ ಮಾತನಾಡಿ ಈ ದೇಶದ ಮೂಲ ನಿವಾಸಿಗಳಾಗಿ ಸದಾ ಅಲೆಮಾರಿಗಳಾಗಿ ಊರ ಹೋರಗಿನ ಗುಡಿಸಲುಗಳಲ್ಲಿ ವಾಸ ಮಾಡುತ್ತ ದೇಶದ ಸಾಂಸ್ಕೃತಿ,ಇತಿಹಾಸವನ್ನು, ಪರಂಪರೆಯನ್ನು ಉಳಿಸಿಕೊಂಡು,ಬೆಳೆಸಿಕೊಂಡು ಬಂದಿರುವ ಚನ್ನದಾಸರ್, ಹೊಲೆಯಾದಾಸರ್, ಮಾಲದಾಸರಿ ಅಲೇಮಾರಿ ಸಮುದಾಯಗಳು ಸದಾ ಹರಿನಾಮ ಸ್ಮರಣೆ ಮಾಡುತ್ತಾ ಏಕತಾರಿ,ಶಂಖ,ಜಾಗಟೆ,ಗಳನ್ನು ಹಿಡಿದು ಅಲೆಯುತ್ತ ಜೀವನಕ್ಕಾಗಿ ಭೀಕ್ಷಾಟನೆ ಮಾಡುವ ರಾತ್ರಿ ವೇಳೆ ಬಯಾಲು ನಾಟಕ ಪ್ರದರ್ಶನದಲ್ಲಿ ತಾಳ ಮದ್ದಲಿ,ಪೀಟಿಲು ನುಡಿಸುತ್ತ ಜೀವನ ಸಾಗಿಸುವ ನಮ್ಮ ಸಮುದಾಯದವರು ಇಂದಿಗೂ ಕೂಡ ರಾಜಕೀಯವಾಗಿ,ಸಾಮಾಜಿಕವಾಗಿ,ಆರ್ಥಿಕವಾಗಿ ಅತ್ಯಂತ ಹಿಂದುಳಿದಿದ್ದರು ಕೂಡ ಒಳ ಮೀಸಲಾತಿಯಲ್ಲಿ ಶೇ1 ರ ವಿಶೇಷ ಸ್ಥಾನ ಮಾನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶದ ಸರ್ವೋಚ್ಚ ನ್ಯಾಯಾಲಯದ ಅದೇಶದ ನಂತರವು ನೀಡದೆ ಸಮುದಾಯವನ್ನು ಮೀಸಲಾತಿಯ ಸೌಲಾಭ್ಯಗಳಿಂದ ವಂಚಿಸುತ್ತಿದೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅಯೋಗವು ನೀಡಿರುವ ಒಳಮೀಸಲಾತಿ ವರದಿಯಂತೆ ನಮ್ಮ ಸಮುದಾಯದವರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಪಟ್ಟಣದ ಶ್ರೀ ಸತ್ಯಸಾಯಿ ಗಾರ್ಡನ್ ನಲ್ಲಿ ಜ.18 ರಂದು ಬೆ.10ಕ್ಕೆ ಅಲೆಮಾರಿಗಳ ಬೃಹತ್ ಸಾಂಸ್ಕೃತಿಕ ಕಲಾ ಪ್ರದರ್ಶನ ಮತ್ತು ಸ್ವಾಭಿಮಾನ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು ನಮ್ಮ ಬೇಡಿಕೆಗಳಾದ ರಾಜ್ಯ ಸರ್ಕಾರವು ನಮ್ಮ ಸಮುದಾಯದ ಭೂರಹಿತ ಅಲೆಮಾರಿಗಳಿಗೆ ಭೂಮಿ,ವಸತಿ ನೀಡಬೇಕು, ಅಲೆಮಾರಿ ನಿಗಮ ಮಂಡಳಿ ರಚನೆ ಮಾಡಿ 5ನೂರು ಕೋಟಿ ಅನುದಾನ ನೀಡಬೇಕು, ಅಲೆಮಾರಿ ಸಮುದಾಯದವರ ಕಲೆಗಳ ಪ್ರದರ್ಶನಕ್ಕೆ ಸಾಂಸ್ಕೃತಿಕ ಭವನಗಳನ್ನು ನಿರ್ಮಾಣ ಮಾಡಿ ಮುಂದಿನ ಪೀಳಿಗೆಗೆ ನಮ್ಮ ಕಲೆಗಳ ಬಗ್ಗೆ ತರಬೇತಿ ನೀಡಬೇಕು,ಅಲೆಮಾರಿ ಸಮುದಾಯಗಳ ಕುಟುಂಬದಲ್ಲಿನ ಮಕ್ಕಳಿಗೆ ಜಿಲ್ಲಾ ಮಟ್ಟದ ವಸತಿ ನಿಲಯಗಳನ್ನು ಪ್ರಾರಂಭಿಸಬೇಕು,ತಾಂತ್ರಿಕ ಮತ್ತು ವೃತ್ತಿ ಶಿಕ್ಷಣ ಹಾಗೂ ಸ್ಪರ್ಧತ್ಮಕ ಪರೀಕ್ಷೆಗಳಿಗೆ ನೀಡುವ ತರಬೇತಿಯಲ್ಲಿ ಮೀಸಲಾತಿ ಕಲ್ಪಿಸಬೇಕು, ಅಲೆಮಾರಿ ಗ್ರಂಥಾಲಯಗಳನ್ನು ವಿಸ್ತರಿಸಬೇಕು,ಅಲೆಮಾರಿ ಮಹಿಳೆಯರು ಸ್ವಾವಲಂಬಿ ಬದುಕಿಗಾಗಿ ಆರ್ಥಿಕ ನೆರವನ್ನು ನೀಡಬೇಕು ಎಂದು ಒತ್ತಾಯಿಸಿ ರಾಜ್ಯದ ಮುಖ್ಯಮಂತ್ರಿಗಳಿಗೆ ಸಮಾವೇಶದಲ್ಲಿ ರಾಜ್ಯ ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಹಾಗೂ ಶಾಸಕ ಹಂಪಯ್ಯನಾಯಕ ರವರಿಗೆ ಮನವಿ ಸಲ್ಲಿಸಲಾಗುವುದು. ಹಾಗೂ ಸಮುದಾಯದ ಪ್ರಶಸ್ತಿ ಪುರಸ್ಕೃತರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಪ.ಜಾತಿ,ಪ.ಪಂಗಡ,ಅಲೆಮಾರಿ ಅಭಿವೃದ್ದಿ ನಿಗಮ ಬೆಂಗಳೂರಿನ ಅಧ್ಯಕ್ಷರಾದ ಜಿ.ಪಲ್ಲವಿ, ಕರ್ನಾಟಕ ರಾಜ್ಯ ಅಲೆಮಾರಿ ಪ.ಜಾ. ಚನ್ನದಾಸರ್, ಹೊಲೆಯಾದಾಸರ್, ಮಾಲದಾಸರಿ ಕ್ಷೇಮಾಭಿವೃದ್ದಿ ಸಂಘ ಬೆಂಗಳೂರು ರಾಜ್ಯಾಧ್ಯಕ್ಷರಾದ ಡಾ.ವಿ.ಚಲಪತಿ, ಕರ್ನಾಟಕ ಜನಪದ ವಿಶ್ವವಿದ್ಯಾಲಯ ಗುತ್ತಗುಡಿಯ ಸಂಶೋಧನಾಧಿಕಾರಿ ಡಾ.ಮಲ್ಲಿಕಾರ್ಜುನ ಮಾನ್ಪಡೆ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಬಸವನಗೌಡ ಬ್ಯಾಗವಾಟ, ಗಂಗಾಧರನಾಯಕ,ರಾಜಾ ವೆಂಕಟಪ್ಪ ನಾಯಕ, ಅಲೆಮಾರಿ ವಿಮುಕ್ತ ಬುಡಕಟ್ಟು ಮಹಾಸಭಾ ಬೆಂಗಳೂರಿನ ಜಂಟಿ ಕಾರ್ಯದರ್ಶಿ ಆನಂದಕುಮಾರ್ ಏಕಲವ್ಯ,ಹಿರಿಯ ದಲಿತ ಪರ ಹೋರಾಟಗಾರಾದ ಅಂಬಣ್ಣ ಅರೋಲಿಕರ್, ಎಸ್,ಮಾರೆಪ್ಪ, ಬಾಲಸ್ವಾಮಿ ಕೋಡ್ಲಿ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ರಾಜ್ಯಯುವ ಘಟಕದ ರಾಜ್ಯಾಧ್ಯಕ್ಷರಾದ ಬಿ.ಉಮೇಶ ಯಾಪಲದಿನ್ನಿ.ಬುಡ್ಗ ಜಂಗಮ ರಾಜ್ಯ ಸಂಚಾಲಕರಾದ ಮಹಾಂತೇಶ್ ಸಿಕಲ್, ಬಿ,ನಾಗಪ್ಪ ಬಾಯಿದೊಡ್ಡಿ, ಎಸ್.ವೆಂಕೋಬ, ಯಲ್ಲಪ್ಪ,ಬಸವರಾಜ, ಪ್ರದೀಪ್ ,ರಮೇಶ,ರಾಮಕೃಷ್ಣ ಇದ್ದರು.

Leave a Reply

Your email address will not be published. Required fields are marked *