ಶಬರಿಮಲೆ ಅಯ್ಯಪ್ಪ ಸ್ವಾಮಿಯ ಪಾವನ ಸನ್ನಿಧಾನದಲ್ಲಿ ಭಕ್ತಿಯ ಜೊತೆಗೆ ಮನದಾಳದ ಹಾರೈಕೆ ವ್ಯಕ್ತವಾದ ಅಪರೂಪದ ಕ್ಷಣವೊಂದು ಸಾಕ್ಷಿಯಾಯಿತು. ಮಾನ್ವಿ ತಾಲೂಕಿನ ಜೀನೂರು ಕ್ಯಾಂಪ್ನ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರೂ, ನಿಕಟಪೂರ್ವ ಶಾಸಕರಾದ ಶ್ರೀ ರಾಜಾ ವೆಂಕಟಪ್ಪ ನಾಯಕ ದೊರೆ ಅವರ ಹೃದಯಪೂರ್ವಕ ಅಭಿಮಾನಿಯಾದ ದೇವರಾಜ ನಾಯಕ (ಬೆಟ್ಟಪ್ಪ) ಅವರು ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಕಠಿಣ ವ್ರತವನ್ನು ಆಚರಿಸಿ ಶಬರಿಮಲೆ ದರ್ಶನ ಪಡೆದರು.
ಆ ಪಾವನ ಕ್ಷಣದಲ್ಲಿ, “ನಮ್ಮ ನಾಯಕ ಮತ್ತೆ ಜನರ ಸೇವೆಗೆ ಬರಲಿ” ಎಂಬ ಅಂತರಂಗದ ಪ್ರಾರ್ಥನೆಯೊಂದಿಗೆ, ಮಾನ್ವಿ ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಶಾಸಕರಾದ ಶ್ರೀ ರಾಜಾ ವೆಂಕಟಪ್ಪ ನಾಯಕ ದೊರೆ ಅವರ ಭಾವಚಿತ್ರವನ್ನು ಅಯ್ಯಪ್ಪ ಸ್ವಾಮಿಯ ಸನ್ನಿಧಾನದಲ್ಲಿ ಹಿಡಿದು ನಿಂತು ಕಣ್ಣೀರೊಳಗೊಂಡ ಭಕ್ತಿಯಿಂದ ಹಾರೈಸಿದರು. 2028ರಲ್ಲಿ ಮತ್ತೆ ಶಾಸಕರಾಗಿ ಆಯ್ಕೆಯಾಗಿ ಜನಸೇವೆ ಮುಂದುವರಿಸುವ ಶಕ್ತಿ, ಆಶೀರ್ವಾದ ದೊರೆಯಲಿ ಎಂಬ ನಂಬಿಕೆಯನ್ನು ದೇವರ ಚರಣಗಳಲ್ಲಿ ಸಮರ್ಪಿಸಿದ ಆ ಕ್ಷಣ, ನಂಬಿಕೆ ಮತ್ತು ಭಾವನೆಯ ಶಕ್ತಿಯನ್ನು ಪ್ರತಿಬಿಂಬಿಸಿದ ಹೃದಯಸ್ಪರ್ಶಿ ದೃಶ್ಯವಾಗಿತ್ತು.
ಮಾನ್ವಿ ತಾಲೂಕಿನ ಇತಿಹಾಸದಲ್ಲಿ ಸರ್ವ ಶ್ರೇಷ್ಠ ಹಾಗೂ ನಿಷ್ಠಾವಂತ ಜನಸೇವೆ ಮಾಡಿದಂತಹ , ಮಾನ್ವಿ ತಾಲೂಕಿನ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿದ ಏಕೈಕ ಶಾಸಕ ರಾಜ ವೆಂಕಟಪ್ಪ ನಾಯಕ “
ಖಾಜಾ ಪಾಷಾ ಬ್ಯಾಗವಾಡ


