ತಾಳಿಕೋಟಿ ತಾಲೂಕಿನ ಚಬನೂರ ಗ್ರಾಮದಲ್ಲಿ ನಡೆಯಲಿರುವ ಸಿದ್ಧಿ ಪುರುಷ ಶ್ರೀರಾಮಲಿಂಗೇಶ್ವರ ನೂತನ ಮಠ ಹಾಗೂ ಸಭಾಭವನ ಉದ್ಘಾಟನಾ ಸಮಾರಂಭದ ನಿಮಿತ್ಯ ಫೆಬ್ರವರಿ 3 ರಂದು ನಡೆಯಲಿರುವ ರೈತೋತ್ಸವ ಕಾರ್ಯಕ್ರಮಕ್ಕೆ ಆಗಮಿಸಲಿರುವ ಕರ್ನಾಟಕ ಸರ್ಕಾರದ ಬೃಹತ್, ಮಧ್ಯಮ ಕೈಗಾರಿಕೆ, ಮೂಲ ಸೌಲಭ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲರಿಗೆ ಕೊಡೆಕಲ್ ಶ್ರೀಗಳ ನೇತೃತ್ವದ ಮಠಾಧೀಶರ ನಿಯೋಗವು ಬುಧವಾರ ಸನ್ಮಾನಿಸಿ ಆಶೀರ್ವಾದ ನೀಡಿತು. ನೇತ್ರ ತಜ್ಞ ಡಾ.ಪ್ರಭುಗೌಡ ಲಿಂಗದಳ್ಳಿ ಮತ್ತಿತರರು ಇದ್ದರು.
