ಮಾನ್ವಿ: ಪಟ್ಟಣದ ಪತ್ರಿಕಾ ಭವನದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಮಾನ್ವಿ ತಾ.ಅಧ್ಯಕ್ಷರಾದ ಅಬ್ದುಲ್ ರೆಹಮಾನ್ ಮಾತನಾಡಿ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಮುಸ್ಲಿಂ ಸಮಾಜದ ಸುಧಾರಣೆಯ ದೃಷ್ಟಿಯಿಂದ ನ.21 ರಿಂದ ನ.30 ರವರೆಗೆ ರಾಷ್ಟçವ್ಯಾಪಿಯಾಗಿ ನೆರೆಹೊರೆಯವರ ಹಕ್ಕುಗಳು, ಮಾದರಿ ನೆರೆಹೊರೆ ಮಾದರಿ ಸಮಾಜ ಎನ್ನುವ ಘೋಷವಾಕ್ಯದೊಂದಿಗೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು . ಜಮಾಅತೆ ಇಸ್ಲಾಮಿ ಹಿಂದ್ ಮಾನ್ವಿ ತಾ.ಘಟಕದಿಂದ ಮಾನ್ವಿ ಪಟ್ಟಣದಲ್ಲಿ ನ.21 ಹಾಗೂ 28 ರಂದು ಜುಮಾ ಖುತ್ಬಾ ಮತ್ತು ಭಾಷಣ ಕಾರ್ಯಕ್ರಮ, ನ.22 ರಂದು ಜಮಾತಿನ ಅಂಗ ಸಂಸ್ಥೆಗಳಾದ ಎಸ್.ಐ.ಓ. ಜಿ.ಐ.ಓ. ಹಾಗೂ ಸಿ.ಐ.ಓಗಳ ಸಹಯೋಗದಲ್ಲಿ ಸಾಂಸ್ಕೃತಿಕ ಹಬ್ಬ ಆಚ್ಚರಣೆ, ನ.23 ರಿಂದ 26 ರವರೆಗೆ ಮುಸ್ಲಿಂ ಭಾಂದವರು ತಮ್ಮ ನೆರೆಹೊರೆಯವರೊಂದಿಗೆ ಸೌಹಾರ್ಧತೆಗಾಗಿ ಚಹಾಕೂಟ, ಪ್ರೀತಿಯ ಭೋಜನಾ, ಉಡುಗೊರೆಗಳ ವಿನಿಮಯ ಕಾರ್ಯಕ್ರಮ ನಡೆಯಲಿದೆ. ನ.27 ರಂದು ಜಮಾತಿನ ಮಹಿಳಾ ವಿಭಾಗದಿಂದ ಮಹಿಳೆಯರಿಗಾಗಿ ವಿಶೇಷ ಸಾಂಸ್ಕೃತಿಕ ದಿನ ಆಚರಣೆ, ನ.29 ರಂದು ಸ್ವಚ್ಚತೆ ಕುರಿತು ರ‍್ಯಾಲಿ ನಡೆಸಲಾಗುವುದು. ಎಂದು ತಿಳಿಸಿದರು.
ಜಮಾಅತೆ ಇಸ್ಲಾಮಿ ಹಿಂದ್ ರಾಯಚೂರು ಜಿಲ್ಲಾ ಸಂಚಾಲಕರಾದ ಅಬ್ದುಲ್ ಕರೀಮ್ ಖಾನ್ ಸಾಬ್, ಮುಹಮ್ಮದ್ ದಾವೂದ್ ಸಿದ್ದಿಖಿ ಸಾಬ್, ಎಮ್.ಎ. ಹೆಚ್. ಮುಖೀಮ್, ಅಬ್ದುಲ್ ರೌಫ್ ಸಾಬ್, ಮಾಧ್ಯಮ ಕಾರ್ಯದರ್ಶಿ ಉಮರ್ ಫಾರೂಖ್ ದೇವರಮನಿ ಇದ್ದರು

Leave a Reply

Your email address will not be published. Required fields are marked *