ವಕೀಲರ ವೃತ್ತಿ ಎಂದರೆ ಅದು ಒಂದು ಅನ್ವೇಷಣೆ – ಜಿ. ಚೇತನ್ ಕುಮಾರ್ ವಕೀಲರು
ಮಾನವಿ:- ವಕೀಲ ವೃತ್ತಿ ಎಂದರೆ ಅದು ಒಂದು ಸತ್ಯದ ಅನ್ವೇಷಣೆ, ವಕೀಲರು ಸತ್ಯದ ಪರವಾಗಿ ಕಾರ್ಯನಿರ್ವಹಿಸಬೇಕು ಎಂದು ಕಲ್ಮಠ ವಿದ್ಯಾಸಂಸ್ಥೆಯ ಹಳೆಯ ವಿದ್ಯಾರ್ಥಿ ಮತ್ತು ವಕೀಲರಾದ ಜಿ. ಚೇತನ್ ಕುಮಾರ್ ಹೇಳಿದರು.
ಅವರು ಬುಧವಾರ ಪಟ್ಟಣದ ಶ್ರೀ ಪಂಪಾ ವಿರೂಪಾಕ್ಷೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ವಿಶ್ವ ವಿಕಲಚೇತನರ ಹಾಗೂ ವಕೀಲರ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಕೀಲರು ನ್ಯಾಯ ಎತ್ತಿ ಹಿಡಿಯುವಲ್ಲಿ ನಿರ್ಣಾಯಕ ಪಾತ್ರ ವಹಿಸಿರುತ್ತಾರೆ, ಭಾರತದ ಮೊದಲನೆಯ ರಾಷ್ಟ್ರಪತಿ ಡಾ .ಬಾಬು ರಾಜೇಂದ್ರ ಪ್ರಸಾದ್ ಅವರ ಜನ್ಮದಿನದ ಸವಿ ನೆನಪಿಗಾಗಿ ವಕೀಲರ ದಿನಾಚರಣೆ ಆಚರಿಸುತ್ತೇವೆ ಎಂದರು.
ಶಿಕ್ಷಕಿ ರೂಪಾ ವಿಶ್ವ ವಿಕಲಚೇತನರ ದಿನಾಚರಣೆಯ ಕುರಿತು ಮಾತನಾಡಿ ವಿಕಲಚೇತನರನ್ನು ಸಮಾಜದಲ್ಲಿ ಸಮಾನವಾಗಿ ಕಾಣಬೇಕು ಅವರಿಗೆ ಅನುಕಂಪಕ್ಕಿಂತ ಅವಕಾಶ ಮಾಡಿಕೊಡಬೇಕು. ವಿಕಲಚೇತನರಾಗಿದ್ದ ಗದುಗಿನ ಪಂಡಿತ್ ಪುಟ್ಟರಾಜ ಗವಾಯಿಗಳು, ಒಲಂಪಿಕ್ ಆಟಗಾರ್ತಿ ಮಾಲತಿ ಹೊಳ್ಳ ಅರುಣಿಮಾ ಸಿನ್ನಾ ಅಂತಹವರು ಮಕ್ಕಳಿಗೆ ಆದರ್ಶ ಪ್ರಾಯವಾಗಿರಬೇಕು ಎಂದು ಹೇಳಿದರು.
ಕಲ್ಮಠ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಮಂಜುನಾಥ್ ಕಮತರ್ ವಕೀಲ ದಿನಾಚರಣೆಯ ಕುರಿತು ಮಾತನಾಡಿದರು.
ಕಲ್ಮಠ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಅಧ್ಯಕ್ಷತೆ ವಹಿಸಿದರು. ವಿಕಲಚೇತನ ವಿದ್ಯಾರ್ಥಿ ಹುಲಿಗೆಯ್ಯ ಆರನೇ ತರಗತಿ ಅನಿಲ್ ನಾಲ್ಕನೇ ತರಗತಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು
ವಿದ್ಯಾರ್ಥಿಗಳಾದ ಶರಣಬಸವ, ಶ್ರೀ ರಾಮ್, ಪೂಜಾ ,ಸಮಂತ ,
ಅನಿಸಿಕೆ ವ್ಯಕ್ತಪಡಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಕೇಮ್ಯಾ ನಾಯ್ಕ, ಪವಿತ್ರ, ಮಹಾಂತಮ್ಮ, ಪ್ರಭಾವತಿ, ಎಂ. ಎಂ. ಹಿರೇಮಠ, ಬ್ರಮರಾಂಭ , ನರಸಿಂಹ, ರಾಘವೇಂದ್ರ , ಶಾಂತಸ್ವಾಮಿ ಇತರರು ಭಾಗವಹಿಸಿದ್ದರು.
ಕುಮಾರಿ ರಿಜ್ವಾನ ಬೇಗ ಕಾರ್ಯಕ್ರಮ ನಿರೂಪಿಸಿದರು. ಸೃಷ್ಟಿ ಮತ್ತು ಭಾರತಿ ಪ್ರಾರ್ಥಿಸಿದರು .
ಕುಮಾರಿ ಸುಜಾತ ಸ್ವಾಗತಿಸಿದರು. ರವಿ ಹುಲಿಯಾಪುರ್ ವಂದಿಸಿದರು.

