ಕವಿತಾಳ 12 : ಜುಲೈ ಪಟ್ಟಣದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ SIR ಕುರಿತು ಮಹತ್ವದ ಸಭೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾನ್ವಿ ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಶಾಸಕರಾದ ಶ್ರೀ ರಾಜಾ ವೆಂಕಟಪ್ಪ ನಾಯಕ ದೊರೆ ಅವರು, SIR ಕುರಿತು ಸಮಗ್ರ ಮಾಹಿತಿ ನೀಡಿ, ಪ್ರತಿಯೊಬ್ಬ ಮತದಾರರೂ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಕಡ್ಡಾಯವಾಗಿ ಪರಿಶೀಲಿಸಬೇಕು ಹಾಗೂ ಯಾವುದೇ ಅರ್ಹ ಮತದಾರರ ಹೆಸರು ಪಟ್ಟಿಯಿಂದ ತಪ್ಪಿಹೋಗದಂತೆ ಜಾಗರೂಕರಾಗಿ ಕಾರ್ಯನಿರ್ವಹಿಸುವಂತೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಸೂಚನೆ ನೀಡಿದರು.. ಇದೇ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಸಿರವಾರ ತಾಲೂಕು ಅಧ್ಯಕ್ಷರಾದ ಮಲ್ಲಿಕಾರ್ಜುನ ಪಾಟೀಲ ಬಲ್ಲಟಗಿ, ಮಾನ್ವಿ ಜೆಡಿಎಸ್ ತಾಲೂಕು ಅಧ್ಯಕ್ಷರಾದ ಈರಣ್ಣ ಮರ್ಲಟ್ಟಿ, ಜೆಡಿಎಸ್ ಪಕ್ಷದ ರಾಜ್ಯ ಯುವ ಘಟಕದ ಉಪಾಧ್ಯಕ್ಷರಾದ ರಾಜಾ ರಾಮಚಂದ್ರ ನಾಯಕ ದೊರೆ, ಮಾಜಿ ಪುರಸಭೆ ಸದಸ್ಯರಾದ ಬಾಷಾ ಸಾಬ್, ಮೌಲಾಸಾಬ್, H ಮೌನೇಶ್ ಗೌಡ, ಶರಣಪ್ಪ ಗೌಡ ಮದ್ಲಾಪುರ, ಮೌನೇಶ್ ನಾಯಕ ಹೀರಾ, ರಂಜಿತ್ ಕುಮಾರ್, ದಾನಪ್ಪ ಸಿರವಾರ,
ರಾಜಶೇಖರ ತೊಪ್ಪಲದೊಡ್ಡಿ, ಶಶಿಧರ ಗೌಡ ಕವಿತಾಳ, ಮೋನಪ್ಪ ವಿಶ್ವಕರ್ಮ, ಖಾಜಾಪಾಶ ಕವಿತಾಳ,ಹನುಮಂತ ಬುಳ್ಳಾಪುರ , ಸೂಗುರಯ್ಯ ಹಿರೇಮಠ,ಕಿರಿಲಿಂಗ
ಮ್ಯಾಗಳಮನಿ ಕವಿತಾಳ, ಹುಸೇನ್ ಭಾಷ ಗಣದಿನ್ನಿ, ಮೌನೇಶ್ ಬಸಾಪುರ.ಹನುಮಂತ ಭೋವಿ, ದವಲ್ ಸಾಬ್.ಮುಸ್ತಫಾ ಒಂಟಿಬಂಡಿ, ಲಳ್ಳೆಪ್ಪ ನಾಯಕ್ ಶಿವಪ್ಪ ಚಲುವಾದಿ ಹನುಮಂತ ಕಬ್ಬರ್.ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು ಸೇರಿದ್ದರು..

