ಸಿಂಧನೂರು : ಶ್ರೀ ಪಿಳಿಕಾನ್ ಮುನೇಶ್ವರ ಹಾಗೂ ಶ್ರೀ ಅಂಗಾಲಪರಮೇಶ್ವರಿ ದೇವರ 43ನೇ ವರ್ಷದ ಪೂಜಾ ಉತ್ಸವ
ರಾಯಚೂರು ಜಿಲ್ಲಾ, ಸಿಂಧನೂರು ತಾಲೂಕಿನ ಪುನರ್ವಸತಿ ಕಾಲೋನಿ ನಂ. 01, ಬರ್ಮಾ ಕ್ಯಾಂಪ್‌ನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಭಕ್ತಿಭಾವದಿಂದ ಶ್ರೀ ಪಿಲಿಕಾಂ ಮುನೇಶ್ವರ ಹಾಗೂ ಶ್ರೀ ಅಂಗಾಲಪರಮೇಶ್ವರಿ ದೇವರ 43ನೇ ವರ್ಷದ ಪೂಜಾ ಉತ್ಸವವನ್ನು ವಿಜೃಂಭಣೆಯಿಂದ ಆಯೋಜಿಸಲಾಗಿದೆ.
ಈ ಉತ್ಸವವು ಶಾಲಿವಾಹನ ಶಕೆ 1948ರ ಪರ ಭಾವನಾಮ ಸಂವತ್ಸರದ ಚೈತ್ರ ಮಾಸದ 5ನೇ ದಿನವಾದ ದಿನಾಂಕ 23-03-2026 ಸೋಮವಾರದಿಂದ ಆರಂಭವಾಗಿ, 01-04-2026 ಬುಧವಾರದವರೆಗೆ ನಡೆಯಲಿದೆ.
ಈ ಅವಧಿಯಲ್ಲಿ ಪ್ರತಿದಿನವೂ ದೇವಸ್ಥಾನದಲ್ಲಿ ಸಾಯಂಕಾಲ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿಸಲ್ಪಡುವವು.
ದಿನಾಂಕ 01-04-2026 ಬುಧವಾರ, ಉತ್ಸವದ ವಿಶೇಷ ಅಂಗವಾಗಿ ಅಗ್ನಿ ಪ್ರವೇಶ ಉತ್ಸವ ನಡೆಯಲಿದ್ದು,
ಸಾರ್ವಜನಿಕರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿದೆ.
ಈ ಅನ್ನದಾಸೋಹವನ್ನು ಶ್ರೀಮತಿ ಮೀನಾ ಕಾಂಬೋ ಅವರ ಕುಟುಂಬದವರು ಪ್ರಾಯೋಜಿಸಿದ್ದಾರೆ.
ಹಾಗೂ ದಿನಾಂಕ 02-04-2026 ಗುರುವಾರ, ಮಂಗಳ ಕಾರ್ಯಗಳೊಂದಿಗೆ ಉತ್ಸವವು ಸಮಾಪ್ತಿಗೊಳ್ಳಲಿದೆ.
ಆದ್ದರಿಂದ ಸಕಲ ಭಕ್ತಾದಿಗಳು ಈ ಪವಿತ್ರ ಉತ್ಸವದಲ್ಲಿ ಭಾಗವಹಿಸಿ, ದೇವರ ಕೃಪೆಗೆ ಪಾತ್ರರಾಗಬೇಕೆಂದು ಕಾರ್ಯಕಾರಿ ಮಂಡಳಿಯ ಪರವಾಗಿ ವಿನಮ್ರವಾಗಿ ವಿನಂತಿಸಲಾಗುತ್ತದೆ.
ಸ್ವಾಗತ ಕೋರುವವರು :
ಅಧ್ಯಕ್ಷರು: ಎಸ್. ಆನಂದ್ ಅಲಗು
ಕಾರ್ಯದರ್ಶಿ: ವಿ. ಸಂತೋಷ್ ಕುಮಾರ್
ವ್ಯವಸ್ಥಾಪಕರು ಹಾಗೂ ಕಾರ್ಯಕಾರಿ ಮಂಡಳಿಯ ಸರ್ವ ಸದಸ್ಯರು

Leave a Reply

Your email address will not be published. Required fields are marked *