ಸಿಂಧನೂರು : ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ನಗರ ಘಟಕದ ಅಧ್ಯಕ್ಷರಾಗಿ ಅಬ್ದುಲ್ ರಫಿ ಬಡಿ ಬೇಸ್ ಅವರನ್ನು ನೇಮಕ ಮಾಡಿ ಜಿಲ್ಲಾ ಅಧ್ಯಕ್ಷರಾದ ಸೈಯದ್ ಫಯಾಜುದೀನ್ ಆದೇಶಿಸಿದ್ದಾರೆ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷರು ವಿಧಾನ ಪರಿಷತ್ತ ಶಾಶಕರು ಅಬ್ದುಲ್ ಜಬ್ಬರ್ ಆದೇಶದ ಹಿನ್ನೆಲೆಯಲ್ಲಿ ಮತ್ತು ವಿಧಾನ ಪರಿಷತ್ತ ಶಾಸಕರಾದ ಬಸನಗೌಡ ಬಾದರ್ಲಿ ಶಿಫಾರಸ್ಸಿನ ಮೇರೆಗೆ ಕಾಂಗ್ರೆಸ್ ಪಕ್ಷದ ಸಂಘಟನೆ ಹಿತಾ ದೃಷ್ಟಿಯಿಂದ ಅಬ್ದುಲ್ ರಫಿ ಬಡಿ ಬೇಸ್ ಅವರನ್ನು ನೇಮಿಸಿದ್ದು ಕೂಡಲೇ ಪಕ್ಷ ನೀಡಿದ ಜವಾಬ್ದಾರಿಯನ್ನು ವಹಿಸಿಕೊಂಡು ಪಕ್ಷದ ಸಂಘಟನೆಯ ಜೊತೆಗೆ ಅಲ್ಪಸಂಖ್ಯಾತರ ಸಮುದಾಯದ ಎಲ್ಲಾ ಅಭಿವೃದ್ಧಿಗಾಗಿ ಶ್ರಮಿಸಬೇಕೆಂದು ಸೂಚಿಸಿದ್ದಾರೆ ಕಾಂಗ್ರೆಸ್ ಅಲ್ಪಸಂಖ್ಯಾತರ ನಗರ ಘಟಕದ ನೂತನ ಅಧ್ಯಕ್ಷರಾಗಿ ನೇಮಕ ಆಗಿರುವ ಅಬ್ದುಲ್ ರಫಿ ಬಡಿವೇಸ್ ಅವರಿಗೆ ವಿಧಾನ ಪರಿಷತ್ತ ಶಾಸಕ ಬಸನಗೌಡ ಬಾದರ್ಲಿ ಅವರು ನೇಮಕಾತಿ ಪತ್ರ ನೀಡಿ ಪಕ್ಷದ ಸಂಘಟನೆಗೆ ಮುಂದಾಗಲು ಕರೆ ನೀಡಿದರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅಬ್ದುಲ್ ರಫಿ ಅವರು ಮಾತನಾಡಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಹಿರಿಯರನ್ನು ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಕೊಟ್ಟ ಜವಾಬ್ದಾರಿಯನ್ನು ತಮ್ಮ ಜೊತೆಗೂಡಿ ಸಂಘಟನೆ ಮಾಡುತ್ತೇನೆ ಎಂದು ಹೇಳಿದರು ನಂತರ ನಗರ ಘಟಕ ಅಲ್ಪಸಂಖ್ಯಾತರ ಅಧ್ಯಕ್ಷರಾಗಿ ನೇಮಕ ಮಾಡಲು ಕಾರಣಕರ್ತರಾದ ಬಸನಗೌಡ ಬಾದರ್ಲಿ ಅಬ್ದುಲ್ ಜಬ್ಬರ್ ಫಯಾಜುದ್ದೀನ್ ರವರಿಗೂ ತುಂಬು ಹೃದಯದ ಧನ್ಯವಾದಗಳು ತಿಳಿಸಿದರು
ಈ ಸಂದರ್ಭದಲ್ಲಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರು ಶಿವಕುಮಾರ್ ಜವಳಿ. ದಡೇ ಸುರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಯುನೂಸ್ ಪಾಷಾ .ಗ್ರಾಮೀಣ ಅಲ್ಪಸಂಖ್ಯಾತ ಅಧ್ಯಕ್ಷರಾದ ದಾದಾಪೀರ್ ದಡೆಸೂರು .ಖಾಜಾ ಸಾಬ್ ರೌಡ್ಕುಂದ . ಖಾಜಾ ಸಾಬ್ ಬಡಿ ಬೇಸ್ ಮುನ್ನ ಶಾಬಾಜ್ ವಾಹಿದ್ ಶಾಕಿರ್ ಅಬ್ದುಲ್ ರಫಿ ಅನೇಕ ಮುಖಂಡರು ಕಾರ್ಯಕರ್ತರು ಭಾಗಿಯಾಗಿದ್ದರು

