ಮಾನ್ವಿ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ (ರಿ) ರಾಯಚೂರು ಬಿ. ರಾಮಣ್ಣ ನಾಯಕ ಜಿಲ್ಲಾಧ್ಯಕ್ಷರು, ತಾಲೂಕಾಧ್ಯಕ್ಷರಾದ ದೇವರಾಜ ನಾಯಕ ಹಾಗೂ ಪ್ರಧಾನ ಕಾರ್ಯದರ್ಶಿಯಾದ ಕೊಂಡಯ್ಯ ನಾಯಕರವರ ಆದೇಶದ ಮೇರೆಗೆ ಮಾನವಿ ತಾಲೂಕ ಘಟಕಕ್ಕೆ ತಾಲೂಕ ಉಪಾಧ್ಯಕ್ಷರಾಗಿ ರಂಗಪ್ಪ ನಾಯಕ ಉಮಳಿ ಹೊಸೂರು ಇವರನ್ನು ತಾಲೂಕ ಪ್ರಧಾನ ಕಾರ್ಯದರ್ಶಿ ಎಂದು ನೇಮಕ ಮಾಡಿದ್ದು. ಕೂಡಲೇ ಸಂಘದ ಎಲ್ಲಾ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಶೈಕ್ಷಣಿಕ, ಆರ್ಥಿಕ, ಹಾಗೂ ಸಂಘಟನೆಯ ಬಲವರ್ಧನೆಗಾಗಿ ಶ್ರಮಿಸಲು ಈ ಮೂಲಕ ತಮಗೆ ಸೂಚಿಸಿ ಆದೇಶಿಸಿದೆ.ನಂತರ ಬಿ ರಾಮಣ್ಣ ನಾಯಕ ಜಿಲ್ಲಾಧಕ್ಷರು ಮಾತನಾಡಿ ನಮ್ಮ ವಾಲ್ಮೀಕಿ ಸಮಾಜ ಅಭಿವೃದ್ಧಿ ಹೊಂದಬೇಕಾದರೆ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಸದೃಢರಾಗಬೇಕು ಎಂದು ಹೇಳಿದರು. ಆಂಜನೇಯ ನಸಲಾಪುರ ಮಾತನಾಡಿ ಸ್ವಾರ್ಥಕ್ಕಾಗಿ ಸಂಘಟನೆಗೆ ಬರಬೇಡಿ ನಿಸ್ವಾರ್ಥ ಮನೋಭಾವನೆಯನ್ನು ಇಟ್ಟುಕೊಂಡು ಸಂಘಟನೆಗೆ ಬನ್ನಿ. ಸಮಾಜದ ನೊಂದು ಬೆಂದವರಿಗೆ ನೆರಳಾಗಿ ವಾಲ್ಮೀಕಿ ಸಮಾಜಕ್ಕೆ ದೊರೆಯುವ ಸೌಲಭ್ಯಗಳನ್ನು ತಿಳಿಸಿ ಎಂದು ಹೇಳಿದರು ನಂತರ ತಾಲೂಕ ಉಪಾಧ್ಯಕ್ಷರಾಗಿ ಆಯ್ಕೆಯಾದ ರಂಗಪ್ಪ ನಾಯಕಗೆ ಅವರ ಅಭಿಮಾನಿ ಬಳಗ ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ,ನಾಯ್ಡು ನಾಯಕ,ವಿನೋದ ಕುಮಾರ, ಕೆ.ಸಾಜೀದ ಪಾಷ , ರಮೇಶ ನಾಯಕ,ಈರಪ್ಪ ನಾಯಕ, ದೇವು, ನರಸಿಂಹ ನಾಯಕ, ಅಭಿ,ಚನ್ನಬಸವ ನಾಯಕ, ಹನುಮಂತ ನಾಯಕ, ರಕ್ಷತಾ ನಾಯಕ, ರಾಜು, ಪರಶುರಾಮ್, ಜಯಕುಮಾರ,ಅಂಬಣ್ಣ ನಾಯಕ ಬೆವನೂರು ನಾಯಕ, ಲಚಮಯ್ಯ ನಾಯಕ ,ಅಯ್ಯನಗೌಡ, ರಹಿಮಾನ್,ಅಂಬಣ್ಣ ನಾಯಕ, ಪ್ರದೀಪ್ ನಾಯಕ, ಇತರರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *