ಮಾನ್ವಿ: ಪಟ್ಟಣದ ಪತ್ರಿಕಾ ಭವನದಲ್ಲಿ ಚಿತ್ತಾಪೂರ ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠ ಕರದಾಳ ಪೀಠಾಧಿಪತಿಗಳಾದ ಡಾ.ಶ್ರೀ ಪ್ರಣವಾನಂದ ಸ್ವಾಮೀಜಿ ಮಾತನಾಡಿ ರಾಜ್ಯದಲ್ಲಿ ಈಡಿಗ ,ಬಿಲ್ಲವ,ನಾಮಧಾರಿ,ಧೀವರ,ತೀಯ ಸೇರಿದಂತೆ 26 ಪಂಗಡಗಳನ್ನು ಹೊಂದಿರುವ ಸಮುದಾಯವನ್ನು ಈಗಿರುವ 2ಎ.ಯಿಂದ ಎಸ್.ಟಿಗೆ ಮೀಸಲಾತಿ ನೀಡುವುದಕ್ಕೆ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು, ನಮ್ಮ ಸಮುದಾಯದ ಕುಲಕಸುಬಗಿರುವ ಸೇಂದಿ ಇಳಿಸುವ ಕಸುಬಿಗೆ ಉಡುಪಿ ಮತ್ತು ಮಂಗಳೂರು ಜಿಲ್ಲೆಗಳಲ್ಲಿ ನೀಡಿರುವ ಅನುಮತಿಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ವಿಸ್ತಾರಿಸಬೇಕು,ಕುಲಕಸುಬನ್ನು ಕಳೆದು ಕೊಂಡಿರುವ ಕಲ್ಯಾಣ ಕರ್ನಾಟಕದ ಸಂತ್ರಸ್ತ ಈಡಿಗ ಸಮುದಾಯದ ಪ್ರತಿ ಕುಟುಂಬಕ್ಕೆ 5 ಎಕರೆ ಕೃಷಿ ಜಮೀನು ಮಂಜೂರು ಮಾಡಬೇಕು. ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ದಿ ನಿಗಮಕ್ಕೆ 5ನೂರುಕೋಟಿ ಅನುದಾನ ಬಿಡುಗಡೆ ಮಾಡಬೇಕು, ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಪುತ್ತಳಿಯನ್ನು ಸ್ಥಾಪಿಸಬೇಕು, ಈಡಿಗ ಸಮಾಜದ ಶ್ರದ್ದಾ ಕೇಂದ್ರವಾದ ಶ್ರೀ ಸಿಗಂಧೂರು ಚೌಡೇಶ್ವರಿ ದೇವಸ್ಥಾನಕ್ಕೆ ಸೂಕ್ತವಾದ ಭದ್ರತೆಯನ್ನು ನೀಡಿ ಅಗತ್ಯ ಭೂಮಿ ಮಂಜೂರು ಮಾಡಬೇಕು, ಮಧ್ಯಮಾರಾಟದಲ್ಲಿ ಸಮುದಾಯದ 26 ಪಂಗಡಗಳಿಗೆ ಶೇ 50 ರಷ್ಟು ಮೀಸಲಾತಿ ನೀಡಿ, ಕೋಟಿ ಚೆನ್ನಯ್ಯರ ಹೆಸರನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ಇಡುವುದಕ್ಕೆ ಕೇಂದ್ರಕ್ಕೆ ಶೀಪಾರಸ್ಸು ಮಾಡಬೇಕು, ಶರಣ ಕೋಟಿ ಚೆನ್ನಯ್ಯರ ಜನ್ಮಸ್ಥಳ ಮತ್ತು ಐಕ್ಯಸ್ಥಳಗಳ ಅಭಿವೃದ್ದಿಗೆ 100ಕೋಟಿ ಅನುದಾನ ನೀಡಬೇಕು,ನಾರಾಯಣ ಗುರುಗಳ ಅಧ್ಯಯನ ಪೀಠವನ್ನು ವಿಶ್ವವಿದ್ಯಾಲಯಗಳಲ್ಲಿ ಸ್ಥಾಪಿಸಬೇಕು,ಹಾಗೂ ವಿಶ್ವವಿದ್ಯಾಲಯಕ್ಕೆ ಬ್ರಹ್ಮಶ್ರೀ ನಾರಾಯಣಗುರುಗಳ ಹೆಸರನ್ನು ಘೋಷಣೆ ಮಾಡಬೇಕು, ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತಿಯ ಅವರ ಹೆಸರನ್ನು ಒಳಗೊಂಡ ರಾಜ್ಯಮಟ್ಟದ 5 ಲಕ್ಷ ನಗದು ಪುರಸ್ಕಾರ ಹೊಂದಿದ ಪ್ರಶಸ್ತಿಯನ್ನು ಸಮುದಾಯದ ಸಾಧಕರಿಗೆ ನೀಡಬೇಕು, ಉತ್ತರ ಕನ್ನಡ ಭಾಗದಲ್ಲಿನ ಅರಣ್ಯ ಪ್ರದೇಶದಲ್ಲಿ ಉಳುಮೆ ಮಾಡಿಕೊಂಡಿರುವ ಹಾಗೂ ಮನೆಗಳನ್ನು ಕಟ್ಟಿಕೊಂಡಿರುವ ಸಮುದಾಯದವರಿಗೆ ಸಕ್ರಮ ಗೊಳಿಸಬೇಕು, ಶರಣರಾದ ಹೆಂಡದ ಮಾರಯ್ಯನವರ ಜಯಂತಿಯನ್ನು ಸರ್ಕಾರದಿಂದ ಆಚರಣೆ ಮಾಡಬೇಕು, ಶಿವಮೋಗ್ಗ ಜಿಲ್ಲೆಯ ಹೊಸನಗರ ಕ್ಷೇತ್ರವನ್ನು ವಿಧಾನಸಭಾ ಕ್ಷೇತ್ರವನ್ನಾಗಿಸಬೇಕು ಹಾಗೂ ಜಿಲ್ಲೆಯಲ್ಲಿನ ಮುಳುಗಡೆ ಸಂತ್ರಸ್ಥರಿಗೆ ಸೂಕ್ತ ಪರಿಹಾರ ವಸತಿ ಕಲ್ಪಿಸಿ ಕೃಷಿ ಜಮೀನು ನೀಡಬೇಕು, ರಾಜ್ಯದಲ್ಲಿ ಸಮುದಾಯದವರಿಗೆ ವಿವಿಧ ವಸತಿ ಯೋಜನೆಗಳಡಿಯಲ್ಲಿ 25 ಸಾವಿರ ಮನೆಗಳನ್ನು ಮಂಜೂರು ಮಾಡಬೇಕು ಸಮುದಾಯದ ಟ್ಟಸ್ಟ್ಗೆ ವೈದ್ಯ ಕಾಲೇಜು ಮಂಜೂರು ಮಾಡಬೇಕು, ರಾಜ್ಯದ ಶಿವಮೊಗ್ಗ ,ಮಂಗಳೂರು,ಕಾರವಾರ,ಉಡುಪಿ, ಜಿಲ್ಲೆಯಲ್ಲಿ 5 ಎಕರೆ ಜಮೀನಿನಲ್ಲಿ ಐ.ಎ.ಎಸ್.ಕೆ.ಎ.ಎಸ್.ಐ.ಪಿ.ಎಸ್. ಸೇರಿದಂತೆ ಉನ್ನತ ಆಡಳಿತ ತರಬೇತಿ ಕೇಂದ್ರಗಳನ್ನು ಸ್ಥಾಪಿಸಬೇಕು ಎನ್ನುವ ಬೇಡಿಕೆಗಳನ್ನು ಇಟ್ಟುಕೊಂಡು. ಚಿತ್ತಾಪೂರ ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠ ಕರದಾಳ ನಿಂದ ಬೆಂಗಳೂರು ವರೆಗೆ 41 ದಿನಗಳಲ್ಲಿ 700 ಕಿ.ಮೀ .ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಫೇ.2 ರಂದು ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಸಮುದಾಯದವರ ಬೃಹತ್ ಸಮಾವೇಶವನ್ನು ಅಯೋಜಿಸಿ ನಮ್ಮ ಬೇಡಿಕೆಗಳ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಶಿವರಾಜ ನಾಯಕ, ಸಮುದಾಯದ ಮುಖಂಡರಾದ ಶ್ರೀರಾಮುಲು ನೀರಮಾನ್ವಿ, ಲಕ್ಷö್ಮಣ ಮಾನ್ವಿ, ಹನುಮಂತ ವಲ್ಕಂದಿನ್ನಿ, ಚಂದ್ರಶೇಖರ, ಆಶೋಕ ಚಾಗಬಾವಿ, ಆಶೋಖ ಮುಸ್ಟೂರು, ಶರಣಬಸವ ನೀರಮಾನ್ವಿ, ಸತ್ಯಪ್ಪ ಮಾನ್ವಿ, ಗುರುರಾಜ ಜೂಕುರು, ಎಸ್.ರಂಗನಾಥ, ವಿನೋದ,ದೇವಪ್ಪ ಸಾದಪೂರ ಸೇರಿದಂತೆ ಇನ್ನಿತರರು ಇದ್ದರು.

