ರಾಯಚೂರು ಜನವರಿ 06 (ಕರ್ನಾಟಕ ವಾರ್ತೆ): ರಾಯಚೂರು ಮಹಾನಗರ ಪಾಲಿಕೆಯ ಅಧ್ಯಕ್ಷತೆಯಲ್ಲಿ ಜನವರಿ 7ರ ಬೆಳಿಗ್ಗೆ 11 ಗಂಟೆಗೆ ಮಹಾನಗರ ಪಾಲಿಕೆ ಜೋನಲ್-2 ಕೋರ್ಟ ಹಾಲ್ (ಹಳೆ ಜಿಲ್ಲಾಧಿಕಾರಿಗಳ ಕಚೇರಿ) ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ರಾಯಚೂರು ಮಹಾನಗರಪಾಲಿಕೆ ವತಿಯಿಂದ ಅನುಷ್ಠಾನವಾಗುತ್ತಿರುವ ಶೇ.29 ಪ.ಜಾತಿ & ಪ.ಪಂಗಡ ಶೇ.7.25 ಇತರೆ ಹಿಂದುಳಿದ ಜನಾಂಗ ಶೇ.5 ವಿಕಲಚೇತನರ ಮುಂತಾದ ಬಡತನ ನಿರ್ಮೂಲನ ಯೋಜನೆಗಳ ಕುರಿತು, ಬಾಕಿ ಉಳಿದ ಅನುದಾನಕ್ಕೆ ಆರ್ಹ ಬಡವರಿಗೆ ಸದುಪಯೋಗವಾಗುವಂತ ಚಟುವಟಿಕೆಗಳ ಕ್ರಿಯಾ ಯೋಜನೆ ಕೈಗೆತ್ತಿಕೊಳ್ಳಬೇಕಾಗಿರುತ್ತದೆ. ಆದಕಾರಣ ಪ.ಜಾತಿ/ಪ.ಪಂಗಡ, ಇತರೆ ಹಿಂದುಳಿದ ವರ್ಗ, ವಿಕಲಚೇತನರು, ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಮುಂತಾದ ಸಂಘಟನೆಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಕರೆದಿರುವ ಸಭೆಗೆ ತಪ್ಪದೆ ಹಾಜರಾಗಿ ಕ್ರಿಯಾ ಯೋಜನೆಯನ್ನು ಸುತ್ತೋಲೆ ಪ್ರಕಾರ ರೂಪಿಸುವುದಕ್ಕೆ ಸಲಹೆ ಸೂಚನೆಗಳನ್ನು ನೀಡಬೇಕೆಂದು ರಾಯಚೂರು ಮಹಾನಗರ ಪಾಲಿಕೆಯ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *